ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕೆ ಬಾಬುರಾವ್ ಚಿಂಚನಸೂರ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿ ಕಾರಿದ್ದರು. ಬೆಂಬಲಿಗರಿಂದ ರಸ್ತೆ ತಡೆ, ಪ್ರತಿಭಟನೆ ಮಾಡಿಸಿ, ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ದೂಳಿಪಟ ಆಗಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶವಾಗಲು ಸಿದ್ದರಾಮಯ್ಯ ಮತ್ತು ಖರ್ಗೆ ಇವರಿಬ್ಬರೇ ಸಾಕು ಎಂದಿದ್ದರು.
ಈಗ ಏಕಾಏಕಿ ಮಾತು ಬದಲಿಸಿದ್ದಾರೆ. ‘ನನ್ನ ರಾಜಕೀಯ ಗುರು ಖರ್ಗೆ. ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಅವರೇ ಕಾರಣ. ನನಗೆ ತಪ್ಪಿದ ಅವಕಾಶ ನನ್ನ ತಮ್ಮ ಪ್ರಿಯಾಂಕ್ಗೆ ಸಿಕ್ಕಿದೆ’ ಎಂದು ರಾಗ ಬದಲಿಸಿದ್ದಾರೆ. ಇವರು ಇಷ್ಟು ಬೇಗ ವರಸೆ ಬದಲಿಸಿದ್ದು ನೋಡಿ, ‘ರಾಜಕೀಯ ಎಂದರೆ ಇದೇ ನೋಡಪಾ...’ ಅಂತ ಜನ ಮೂಗಿನ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ.