ನವದೆಹಲಿ (ಪಿಟಿಐ): ಎರಡನೇ ತಲೆಮಾರಿನ ತರಂಗಾಂತರ ಹಂಚಿಕೆ (2ಜಿ) ಹಗರಣಕ್ಕೆ ಸಂಬಂಧಿಸಿದ ಹಣದ ಲೇವಾದೇವಿ ಪ್ರಕರಣದಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನಿಮೊಳಿ ಹಾಗೂ ಇನ್ನಿತರ 17 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯವು(ಇ.ಡಿ) ದೆಹಲಿಯ ವಿಶೇಷ ಕೋರ್ಟ್ನಲ್ಲಿ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್್ ನವೀನ್ ಕುಮಾರ್್ ಮಟ್ಟಾ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ.ಸೈನಿ ಅವರ ಮುಂದೆ ಆರೋಪಪಟ್ಟಿ ಸಲ್ಲಿಸಿದರು.
ಏಪ್ರಿಲ್್ 30ರಂದು ಈ ಸಂಬಂಧ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್್, ಸ್ವಾನ್್ ಟೆಲಿಕಾಂ ಪ್ರೈವೆಟ್ ಲಿಮಿಟೆಡ್ (ಎಸ್ಟಿಪಿಎಲ್) ಪ್ರವರ್ತಕರಾದ ಶಾಹಿದ್್ ಉಸ್ಮಾನ್್ ಬಲ್ವಾ, ವಿನೋದ್ ಗೋಯೆಂಕಾ ಅವರನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಿದೆ. ಡಿಎಂಕೆ ನಡೆಸುವ ಕಲೈಂಗಾರ್್ ಟಿ.ವಿಗೆ ₨200 ಕೋಟಿ ಕೊಟ್ಟ ಆರೋಪ ಎಸ್ಟಿಪಿಎಲ್ ಪ್ರವರ್ತಕರ ಮೇಲಿದೆ.
ಅಕ್ರಮ ಹಣ ಚಲಾವಣೆ ಕಾಯ್ದೆ ತಡೆ ಅಡಿ 10 ವ್ಯಕ್ತಿಗಳು ಹಾಗೂ 9 ಕಂಪೆನಿಗಳ ವಿರುದ್ಧ ಇ.ಡಿ ದೋಷಾರೋಪ ಹೊರಿಸಿದೆ. ಕುಸೆಗಾಂ ಫ್ರೂಟ್ಸ್ ಆ್ಯಂಡ್ ವೆಜಿಟೇಬಲ್ ಪ್ರೈವೆಟ್ ಲಿಮಿಟೆಡ್ ನಿರ್ದೇಶಕರಾದ ಆಸಿಫ್್ ಬಲ್ವಾ ಹಾಗೂ ರಾಜೀವ್್ ಅಗರ್ವಾಲ್, ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ, ಕಲೈಂಗಾರ್್ ಟಿ.ವಿ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಅವರನ್ನು ಕೂಡ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.