ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರಾ? ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ತಿವಾರಿ ಅವರು `ಫಲಿತಾಂಶವು ತುಂಬಾ ನಿರಾಸೆ ಉಂಟುಮಾಡಿದೆ. ರಾಜೀನಾಮೆ ಕುರಿತಂತೆ ನಾನು ಯೋಚನೆ ಮಾಡಿಲ್ಲ. ಹುದ್ದೆ ತೊರೆಯುವುದೊಂದೇ ಮುಂದಿನ ದಾರಿಯಲ್ಲ' ಎಂದು ತಿಳಿಸಿದರು.
`ಕಾಂಗ್ರೆಸ್ನ ಪ್ರಮಾದಗಳ ಕುರಿತಂತೆ ಆತ್ಮಾವಲೋಕನ ನಡೆಸುವ ಅಗತ್ಯವಿದೆ. ಅಷ್ಟೇ ಅಲ್ಲದೇ, ವಿರೋಧ ಪಕ್ಷದವರು ಬಳಸಿದ ಕಾರ್ಯತಂತ್ರ ಕಂಡುಹಿಡಿಯಬೇಕಿದೆ' ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ತಿವಾರಿ ಹೇಳಿದರು.
`ಈವರೆಗಿನ ಪ್ರಕ್ರಿಯೆ ಕುರಿತಂತೆ ಸಮಗ್ರವಾದ ವಿಶ್ಲೇಷಣೆ ಮತ್ತು ಆತ್ಮಾವಲೋಕನ ನಡೆಸುವ ಅಗತ್ಯವಿದೆ. ಈ ಪ್ರಕ್ರಿಯೆಯಿಂದಲೇ ಪಕ್ಷವನ್ನು ಪುನರ್ ಸಂಘಟನೆ ಸಾಧ್ಯ' ಎಂದರು.