ನವದೆಹಲಿ (ಪಿಟಿಐ): ತೆಲಂಗಾಣ ಮತ್ತು ಆಂಧ್ರಪ್ರದೇಶ ಇಬ್ಭಾಗದ ಹಿನ್ನೆಲೆಯಲ್ಲಿ ರಾಜ್ಯದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರನ್ನೂ ಶುಕ್ರವಾರ ಡ್ರಾ ಮೂಲಕ ವಿಂಗಡಣೆ ಮಾಡಲಾಯಿತು.
ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ಸಮ್ಮುಖದಲ್ಲಿ ಲಾಟರಿ ಮೂಲಕ 18 ರಾಜ್ಯಸಭಾ ಜನರನ್ನು ಎರಡೂ ರಾಜ್ಯಗಳಿಗೆ ವಿಂಗಡಿಸಲಾಯಿತು.
ರಾಜ್ಯದಿಂದ ಆಯ್ಕೆಯಾದ ಒಟ್ಟು 18 ರಾಜ್ಯಸಭಾ ಸದಸ್ಯರ ಪೈಕಿ ತೆಲಂಗಾಣದಿಂದ ಟಿಡಿಪಿಯ ಮೂವರು ಹಾಗೂ ಕಾಂಗ್ರೆಸ್ನ ನಾಲ್ವರು ಸಂಸದರು ಆಯ್ಕೆಯಾಗಿದ್ದಾರೆ. ಉಳಿದ 11 ಸಂಸದರು ಸೀಮಾಂಧ್ರದಿಂದ ಆಯ್ಕೆಯಾಗಿದ್ದಾರೆ.