ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಚುನಾವಣಾ ಆಯುಕ್ತ:ಅಧಿಕಾರ ಸ್ವೀಕಾರ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎನ್‌. ಶ್ರೀನಿ­ವಾಸಾ­ಚಾರಿ ಬುಧವಾರ ಅಧಿಕಾರ ವಹಿಸಿಕೊಂಡರು. ಆಯುಕ್ತರಾದ ಎರಡನೇ ದಿನ ಅವರು ಜೋಗ– ಕಾರ್ಗಲ್ ಪಟ್ಟಣ ಪಂಚಾ­ಯಿತಿಗೆ ಚುನಾವಣಾ ವೇಳಾಪಟ್ಟಿ ಘೋಷಿಸಿದ್ದಾರೆ. ಡಿ.5ರಂದು ಚುನಾ­ವಣೆ ನಡೆಯಲಿದೆ.

25 ಜಿಲ್ಲೆಗಳ ವಿವಿಧ ಗ್ರಾಮ ಪಂಚಾ­ಯಿತಿಗಳಿಗೂ ಅಂದೇ ಉಪ ಚುನಾವಣೆ ನಡೆಯಲಿದೆ. ಚುನಾವಣೆಗೆ ಆಯಾ ಜಿಲ್ಲಾಧಿ­ಕಾರಿಗಳು ಅಧಿಸೂಚನೆ ಹೊರ­ಡಿ­ಸಲಿ­ದ್ದಾರೆ ಎಂದು ಹೇಳಿದರು.

ಭೇಟಿ: ರಾಜ್ಯಪಾಲ ವಜು ಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರನ್ನು ಆಯುಕ್ತರು ಭೇಟಿ ಮಾಡಿ, ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT