ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಟಿಟಿ: ಸೇಜಲ್‌, ಕೌಮುದಿಗೆ ಮುನ್ನಡೆ

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಧಾರವಾಡ: ಸೇಜಲ್‌, ಕೌಮುದಿ, ಹರ್ಷಿತ್‌ ಇಲ್ಲಿ ನಡೆಯುತ್ತಿರುವ ರಾಜ್ಯ ರ್‍್ಯಾಂಕಿಂಗ್‌ ಟೇಬಲ್‌ ಟೆನ್ನಿಸ್‌ ಟೂರ್ನಿಯಲ್ಲಿ  ಸೆಮಿಫೈನಲ್‌ ಪ್ರವೇಶಿಸಿದರು.

ಅಗ್ರ ಶ್ರೇಯಾಂಕದ ಸೇಜಲ್ ಕೌಶಿಕ್ ಅವರು ಅಪೂರ್ವಾ ಅವರನ್ನು 4–1ರಿಂದ ಸೋಲಿಸಿದರು. ಎರಡನೇ ಶ್ರೇಯಾಂಕದ ಆಟಗಾರ್ತಿ ಕೌಮದಿ ಪಾಟನ್ಕರ್‌ ಅವರು ಸಹನಾ ಕುಲಕರ್ಣಿ ಅವರನ್ನು 4–2ಸೆಟ್‌ಗಳ ಅಂತರದಿಂದ ಮಣಿಸಿದರು. ಮೂರನೇ ಶ್ರೇಯಾಂಕಿತ ಸುಷ್ಮಿತಾ ಬಿದರಿ ಅವರು ವೈಷ್ಣವಿ ಅವರನ್ನು 4–1ರಿಂದ ಹಾಗೂ ನಾಲ್ಕನೇ ಶ್ರೇಯಾಂಕದ ಸಂಯುಕ್ತ ಅವರು ಐಶ್ವರ್ಯ ಬಿದರಿ ಅವರನ್ನು 4–2ರಿಂದ ಸೋಲಿಸಿದರು.

ಪುರುಷರ ಪಂದ್ಯಾವಳಿಯಲ್ಲಿ ಎಂಎಸ್‌ಟಿಟಿಎನ ಹರ್ಷಿತ್‌ ಅವರು ಅಗ್ರ ಶ್ರೇಯಾಂಕಿತ ಬೆಂಗಳೂರಿನ ಕೆನರಾ ಬ್ಯಾಂಕ್‌ನ ರಕ್ಷಿತ್‌ ಬಾರಿಗಿಡದ್‌ ಅವರನ್ನು 3–2 ಸೆಟ್‌ಗಳ ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದರು. ಜತೆಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಬೆಂಗಳೂರಿನ ಬಿಎನ್‌ಎಂನ ಶ್ರೇಯಾಂಕ ರಹಿತ ಕೃಷ್ಣ ಅವರು ಮೂರನೇ ಶ್ರೇಯಾಂಕದ ಅಕ್ಷಯ ಮೊಹಾಂತಾ ಅವರನ್ನು 4–3ಸೆಟ್‌ಗಳಿಂದ ಸೋಲಿಸಿ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದರು.

ಬಾಲಕಿಯರ ವಿಭಾಗದಲ್ಲಿ ಐದನೇ ಶ್ರೇಯಾಂಕಿತ ಸೇಜಲ್ ಕೌಶಿಕ್‌ ಅವರು ನಾಲ್ಕನೇ ಶ್ರೇಯಾಂಕಿತ ಅದಿತಿ ಜೋಶಿ ಅವರನ್ನು 4–3 ಸೆಟ್‌ಗಳಿಂದ ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದರು. ಅಗ್ರ ಶ್ರೇಯಾಂಕಿತ ಕೌಮುಡಿ ಪಾಟನ್ಕರ್‌ ಅವರು ದೃಷ್ಟಿ ಮೋರೆ ಅವರನ್ನು 4–1 ಸೆಟ್‌ಗಳಿಂದ ಭಾರೀ ಅಂತರದಿಂದ ಗೆಲುವು ಸಾಧಿಸಿದರು.

ದ್ವಿತೀಯ ಶ್ರೇಯಾಂಕದ ಸಂಯುಕ್ತ ಅವರು ಅದ್ಭುತವಾಗಿ ಆಟವಾಗಿ ವೈಷ್ಣವಿ ಅವರನ್ನು 4–1ಸೆಟ್‌ಗಳಿಂದ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಸುಷ್ಮಿತಾ ಬಿದರಿ ಅವರು ಯಶಸ್ವಿನಿ ಘೋರ್ಪಡೆ ಅವರು ಸುಷ್ಮಿತಾ ಬಿದರಿ ಅವರನ್ನು ಮಣಿಸಿ ಸೆಮಿ ಫೈನಲ್‌ ಹಂತವನ್ನು ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT