ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ತಂಡಕ್ಕೆ ಆದಿತ್ಯ ನಾಯಕ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಂಗಾಳ ತಂಡದ ಎದುರು ನವೆಂಬರ್‌ ಒಂದರಿಂದ ನಾಲ್ಕು ದಿನ ಕೋಲ್ಕತ್ತದಲ್ಲಿ ನಡೆಯುವ 19 ವರ್ಷದೊಳಗಿನವರ ಕೂಚ್‌ ಬೆಹಾರಿ ಟ್ರೋಫಿ ಎಲೈಟ್‌ ‘ಸಿ’ ಗುಂಪಿನ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಸೋಷಲ್‌ ಕ್ರಿಕೆಟರ್ಸ್‌ ಕ್ಲಬ್‌ ಪ್ರತಿನಿಧಿಸುವ ಆದಿತ್ಯ ಸೋಮಣ್ಣ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಆಲ್‌ರೌಂಡರ್ ಆದಿತ್ಯ ಹೋದ ವರ್ಷ ಎನ್‌ಸಿಎಯಲ್ಲಿ ತರಬೇತಿ ಪಡೆಯಲು ದಕ್ಷಿಣ ವಲಯದಿಂದ ಆಯ್ಕೆಯಾಗಿದ್ದರು. ಪ್ರತಿ ವಲಯದಿಂದ ಒಬ್ಬ ಆಟಗಾರನನ್ನು ಎನ್‌ಸಿಎನಲ್ಲಿ ಅಭ್ಯಾಸಕ್ಕಾಗಿ ಬಿಸಿಸಿಐ ಆಯ್ಕೆ ಮಾಡುತ್ತದೆ. ಜೈನ್‌ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕೆಪಿಎಲ್‌ನಲ್ಲಿ ಬಿಜಾಪುರ ಬುಲ್ಸ್ ತಂಡದಲ್ಲಿದ್ದರು.

ತಂಡ ಇಂತಿದೆ: ಆದಿತ್ಯ ಸೋಮಣ್ಣ (ನಾಯಕ), ಎ.ಪಿ. ಅಭಿಷೇಕ್‌, ಎಸ್‌.ಪಿ. ಅರ್ಜುನ್‌, ಕೆ.ಎಲ್‌. ಶ್ರೀಜಿತ್, ಸೈಯದ್‌ ಸುಫಿಯಾನ್, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ವಿಷ್ಣು ಪ್ರಿಯನ್‌, ಲಿಖಿತ್‌ ಬನ್ನೂರ್‌, ಸಿಮೊನ್‌ ಲೂಯಿಜ್‌, ಎಂ.ಬಿ. ದರ್ಶನ್‌, ಪ್ರಸಿದ್‌್ ಎಂ. ಕೃಷ್ಣ, ಡಿ. ಅವಿನಾಶ್, ಬಿ.ಆರ್. ಶರತ್‌, ರಾಹುಲ್ ಸಿ. ಪಿಂಟೊ ಮತ್ತು ಜಿ. ನವೀನ್‌.
ಪಿ.ವಿ. ಶಶಿಕಾಂತ್ ಹಾಗೂ ಎಂ. ವಿಜಯ್‌ (ತರಬೇತುದಾರರು), ಅನುತೋಷ್‌ ಪಾಲ್‌ (ಮ್ಯಾನೇಜರ್‌), ಜಾಬ ಪ್ರಭು (ಫಿಸಿಯೊ) ಮತ್ತು ಪಿ. ರಾಜೀವ್‌ (ವಿಡಿಯೊ ವಿಶ್ಲೇಷಕ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT