ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದ ಅಬಕಾರಿ ವರಮಾನ ಈ ಬಾರಿ ರೂ 680 ಕೋಟಿ ಕಡಿಮೆಯಾಗುವ ಸಂಭವವಿದೆ ಎಂದು ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ ಹೇಳಿದೆ.
ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಸಲ ರೂ 14,430 ಕೋಟಿ ಅಬಕಾರಿ ವರಮಾನ ಸಂಗ್ರಹ ಗುರಿ ಹೊಂದಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಇದು ಶೇ 8.6ರಷ್ಟು ಹೆಚ್ಚು. ಆದರೆ ಮೊದಲ ಎರಡು ತ್ರೈಮಾಸಿಕ ಜಮೆಯನ್ನು ಅವಲೋಕಿಸಿದರೆ ವರಮಾನ ಕಡಿಮೆಯಾಗಲಿದೆ ಎಂದು ವರದಿ ಹೇಳಿದೆ.