ಬಾಗೂರು ಹೋಬಳಿ ಮರಗೂರು ಗ್ರಾಮದಲ್ಲಿ ರೈತ ಶಿವರಾಂ ಎರಡು ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಈಚೆಗೆ ದುಷ್ಕರ್ಮಿಗಳು ಅದಕ್ಕೆ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. ಇದರಿಂದ ರೈತ ಕುಟುಂಬ ಹತಾಶರಾಗಿತ್ತು. ಅವರಿಗೆ ರೈತ ಸಂಘ ಧೈರ್ಯ ತುಂಬಬೇಕಾಯಿತು ಎಂದರು.
ಸಕ್ಕರೆ ಕಾರ್ಖಾನೆಯ ಕ್ಷೇತ್ರ ಅಧಿಕಾರಿ ಪರ್ಮಿಟ್ ಅನ್ನು ರೈತ ಶಿವರಾಂ ಅವರಿಗೆ ನೀಡದೇ ತನ್ನಲ್ಲಿ ಇರಿಸಿಕೊಂಡಿದ್ದಾರೆ. ಪರ್ಮಿಟ್ ಪಡೆಯಲು ಲಂಚ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಇದುವರೆಗೆ ಕಬ್ಬು ಅರೆಯುವಿಕೆ ಆರಂಭಿಸಿಲ್ಲ. ₹ 6 ಕೋಟಿ ಬಾಕಿ ಉಳಿಸಿ ಕೊಂಡಿರುವ ಹಣ ಕೂಡಲೇ ಪಾವತಿಸ ಬೇಕು. ಕಾರ್ಖಾನೆಗೆ ಕಬ್ಬು ಪೂರೈಸಿದ 14 ದಿನದ ಒಳಗೆ ಹಣ ಪಾವತಿಸುವಂತಾ ಗಬೇಕು ಎಂದು ಒತ್ತಾಯಿಸಿದರು.
ಬುಧವಾರ ರಾತ್ರಿಯಿಂದ ಧರಣಿ ನಡೆಸುತ್ತಿದ್ದರೂ ಕಾರ್ಖಾನೆ ಅಧಿಕಾರಿ ಗಳು ಭೇಟಿ ನೀಡಿಲ್ಲ. ತಹಶೀಲ್ದಾರ್ ಭೇಟಿ ನೀಡಿದರಾದರು ಸಮಸ್ಯೆ ಬಗೆಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎ.ಎನ್. ಮಂಜೇಗೌಡ, ಕಲಾವಿದ ಮಿಲ್ಟ್ರಿ ಮಂಜು ನೇತೃತ್ವ ವಹಿಸಿದ್ದರು.