ಘಟನೆಯಲ್ಲಿ ಗಾಯಗೊಂಡ 20 ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿರುವ ಸಿಕಂದರಾಬಾದ್ ನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ತೆಲಂಗಾಣ ಆರೋಗ್ಯ ಸಚಿವ ಟಿ. ರಾಜಯ್ಯ ಅವರು ಮಾಹಿತಿ ನೀಡಿ, ಗಾಯಗೊಂಡ ನಾಲ್ಕು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಏಳು ವಿದ್ಯಾರ್ಥಿಗಳಿಗೆ ಕೃತಕ ಉಸಿರಾಟ ನೀಡಲಾಗಿದೆ. ಉಳಿದಂತೆ 9 ವಿದ್ಯಾರ್ಥಿಗಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.