ಈ ರೈಲು ಬಂದು ಹೋಗುವ ಸಮಯವು ಬೆಂಗಳೂರಿಗೆ ಕೆಲಸಕ್ಕೆ ಬರುವ ಉದ್ಯೋಗಿಗಳ ಕೆಲಸದ ವೇಳೆ ಆಗಲೀ, ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿ ವರ್ಗಕ್ಕೆ ಆಗಲೀ, ಯಶವಂತಪುರಕ್ಕೆ ಬೆಳೆದ ತರಕಾರಿ, ಹಣ್ಣು, ಹೂಗಳನ್ನು ಬೆಳಿಗ್ಗೆ ತಂದು ಮಾರಾಟ ಮಾಡುವ ರೈತ ವರ್ಗಕ್ಕೆ ಆಗಲೀ ಯೋಗ್ಯವಾದ ಸಮಯವಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲು ಸೇತುವೆ ಇದ್ದರೂ ವಾಹನ ದಟ್ಟಣೆಯಿಂದಾಗಿ ಈ ರಸ್ತೆಯ ಮೂಲಕ ನೆಲಮಂಗಲದಿಂದ ಬೆಂಗಳೂರು ತಲುಪಲು ಸುಮಾರು 2 ಗಂಟೆ ಬೇಕಾಗುತ್ತದೆ.
ಈ ಬಗ್ಗೆ ಗಮನಹರಿಸಿ ಈ ರೈಲನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರತಿ 2 ಗಂಟೆಗೆ ಒಮ್ಮೆ ಬೆಂಗಳೂರು–ನೆಲಮಂಗಲಕ್ಕೆ ಓಡಾಟದ ವ್ಯವಸ್ಥೆಯನ್ನು ಮಾಡಿಕೊಟ್ಟರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
–ಜಿ. ಸಿದ್ದಗಂಗಯ್ಯ