ಬಳಿಕ ಅಜಿಂಕ್ಯಾ ರಹಾನೆ (25), ಚುಟುಕು ಕ್ರಿಕೆಟ್ ಪರಿಣಿತ ಸುರೇಶ್ ರೈನಾ (30) ಹಾಗೂ ಹಾರ್ದೀಕ್ ಪಾಂಡ್ಯ (27) ಅವರು ತಂಡದ ಮೊತ್ತ ಹೆಚ್ಚಿಸಿದರು.
ಆದರೆ, ಯುವರಾಜ್ ಸಿಂಗ್ ಮೊದಲ ಎಸೆತದಲ್ಲಿಯೇ ಅಬ್ಬರ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ನಿರ್ಗಮಿಸಿದರು.
ನಾಯಕ ಮಹೇಂದ್ರ ಸಿಂಗ್ ದೋನಿ(09) ಹಾಗೂ ರವೀಂದ್ರ ಜಡೇಜ (1) ಅಜೇಯರಾಗಿ ಉಳಿದರು.
ತಿಸಾರ ಪೆರೆರಾ ಮೂರು ವಿಕೆಟ್ ಕಬಳಿಸಿ ಮಿಂಚಿದರು. ದುಷ್ಮಂತಾ ಚಾಮೀರಾ ಎರಡು ವಿಕೆಟ್ ಉರುಳಿಸಿದರು. ಸಚಿತ್ರಾ ಸೇನಾನಾಯಕೆ ಒಂದು ವಿಕೆಟ್ ಪಡೆದರು.
ಕಳೆದ ಪಂದ್ಯದಲ್ಲಿ ತಲಾ ಮೂರು ವಿಕೆಟ್ ಪಡೆದು ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ್ದ ಕಸುನಾ ರಜಿತಾ ಮತ್ತು ದಸುನಾ ಶನಕಾ ಯಾವುದೇ ವಿಕೆಟ್ ಇಲ್ಲದೇ ಪರದಾಡಿದರು.