ಬೆಂಗಳೂರು: ಲಕ್ಷ್ಮೀಪುರ ಘನತ್ಯಾಜ್ಯ ಘಟಕದ ಪಕ್ಕದಲ್ಲಿ ಸಂಗ್ರಹವಾದ ಕೊಳಚೆ ನೀರಿನಿಂದ ಅಂತರ್ಜಲ ಕಲುಷಿತ ಆಗದಂತೆ ತಡೆಯಲು ಖಾಸಗಿ ಸಂಸ್ಥೆ ಜತೆಗೂಡಿ ಗುತ್ತಿಗೆದಾರರು ಸೋಮವಾರ ರಾಸಾಯನಿಕ ದ್ರಾವಣ ಮಿಶ್ರಣ ಮಾಡುವ ವ್ಯವಸ್ಥೆ ಮಾಡಿದ್ದಾರೆ.
ಗುತ್ತಿಗೆದಾರರ ಜತೆ ‘ಪ್ರಾಪರ್ಟಿಲೂಪ್ಟಿ’ ಸಂಸ್ಥೆ ಕೈಜೋಡಿಸಿದೆ. ಈ ಘಟಕಕ್ಕೆ 10 ಸಾವಿರ ಲೀಟರ್ ದ್ರಾವಣದ ಅಗತ್ಯವಿದೆ. ಆದರೆ, ಸೋಮವಾರ 1,500 ಲೀಟರ್ ದ್ರಾವಣ ಸುರಿಯಲಾಗಿದೆ.
ದ್ರಾವಣ ಸುರಿಯುವ ಮುನ್ನ ಅಲ್ಲಿನ ಮಾದರಿ ಸಂಗ್ರಹಿಸಲಾಗಿದ್ದು, ಹತ್ತು ದಿನಗಳ ಬಳಿಕ ದ್ರಾವಣದಿಂದ ಆಗಿರುವ ಬದಲಾವಣೆಯನ್ನು ಅಭ್ಯಸಿಸಲಾಗುವುದು ಎಂದು ಪರಿಸರತಜ್ಞ ಕಿರಣ್ ಕುಲಕರ್ಣಿ ತಿಳಿಸಿದ್ದಾರೆ.