ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿಯ ಸಂಚುಕೋರ ಜಕಿವುರ್ ರೆಹಮಾನ್ ಲಖ್ವಿಗೆ ಇಸ್ಲಾಮಾಬಾದ್ನ ಭಯೋತ್ಪಾದನೆ ತಡೆ ನ್ಯಾಯಾಲಯ ನೀಡಿದ್ದ ಜಾಮೀನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಪಾಕಿಸ್ತಾನ ಸರ್ಕಾರ ವಿಫಲವಾಗಿದೆ.
ಭಯೋತ್ಪಾದನೆ ತಡೆ ನ್ಯಾಯಾಲಯದ ಆದೇಶದ ಪ್ರತಿಯನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ.
‘ಭಯೋತ್ಪಾದನೆ ತಡೆ ನ್ಯಾಯಾಲಯದ ಆದೇಶದ ಪ್ರತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದೇಶದ ಪ್ರತಿ ಕೈ ಸೇರದೆ ಮೇಲ್ಮನವಿ ಅಸಾಧ್ಯವಾಗಿರುವುದರಿಂದ ಮಂಗಳವಾರವೂ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಲಿಕ್ಕಿಲ್ಲ. ಅಲ್ಲದೆ ಪ್ರತಿ ಸಿಕ್ಕ ಮೇಲೆ ಅದರ ಅಧ್ಯಯನಕ್ಕೆ ಸಮಯ ಬೇಕು’ ಎಂದು ಪ್ರಾಸಿಕ್ಯೂಷನ್ ಮುಖ್ಯಸ್ಥ ಚೌಧರಿ ಅಜರ್ ಹೇಳಿದ್ದಾರೆ.