ನವದೆಹಲಿ (ಪಿಟಿಐ): ಪೊಲೀಸ್ ಹಾಗೂ ಜೈಲು ಅಧಿಕಾರಿಗಳ ವಶದಲ್ಲಿರುವ ಆರೋಪಿಗಳ ಸಾವು ಹಾಗೂ ಅವರ ಮೇಲೆ ನಡೆಯುವ ಕಿರುಕುಳ ತಪ್ಪಿಸುವುದಕ್ಕೆ ಕೋರ್ಟ್ ಸಹಾಯಕ ಎ.ಎಂ.ಸಿಂಘ್ವಿ ನೀಡಿರುವ ಸಲಹೆಗಳನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ.
ದೇಶದಾದ್ಯಂತ ಪೊಲೀಸ್ ಠಾಣೆಗಳು ಮತ್ತು ಜೈಲುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಮಾನವ ಹಕ್ಕು ಆಯೋಗದ ರಚನೆ, ಜೈಲುಗಳಿಗೆ ದಿಢೀರ್ ಭೇಟಿ...ಇತ್ಯಾದಿ ಸಲಹೆಗಳನ್ನು ಸಿಂಘ್ವಿ ಕೊಟ್ಟಿದ್ದರು.