ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆಗೆ ಅವಕಾಶ ಕಲ್ಪಿಸಲಿ

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ರಾಜ್ಯ ರಸ್ತೆ ಸಾರಿಗೆಯ ವಿವಿಧ ನಿಗಮಗಳಲ್ಲಿ ಕೆಲಸ ಮಾಡುವ ಚಾಲಕ, ನಿರ್ವಾಹಕ ಹಾಗೂ ಇತರ ಕುಶಲ ಕರ್ಮಿಗಳಿಗೆ, ಅಂತರ ವಿಭಾಗೀಯ  ವರ್ಗಾ­ವಣೆ ಆಗುತ್ತಿಲ್ಲ. ಇದಕ್ಕೆ ಅವಕಾಶ ಕಲ್ಪಿಸಬೇಕು. ಈ ಸಾರಿಗೆ ನಿಗಮಗಳಲ್ಲಿ 10 ವರ್ಷಗಳಿಗಿಂತ ಹೆಚ್ಚು ಅವ­ಧಿಯ ಸೇವೆ ಸಲ್ಲಿಸಿದ ಹಾಗೂ ಆನಾರೋಗ್ಯ, ಮಕ್ಕಳ  ವಿವಾಹ, ಶಿಕ್ಷಣ ಮುಂತಾದ ಪ್ರಮಾಣಿಕ ಕಾರಣ­ಗಳಿಂದ ವರ್ಗಾವಣೆ ಬಯಸುವವರಿಗೆ, ವರ್ಗಾವಣೆ ಮಾಡಬೇಕು.

ಬರೀ ಘೋಷಣೆ ಮಾಡುವುದರಲ್ಲೇ, ವರದಿ ತರಿಸುವುದರಲ್ಲೇ ಕಾಲ ಕಳೆಯುವ ಸಾರಿಗೆ ಮಂತ್ರಿ­ಗಳು ಇತ್ತ ಗಮನ ಕೊಡಬೇಕು. ಈ ಸಂಬಂಧ   ಸಿಬ್ಬಂದಿ­ಯಲ್ಲಿರುವ ಅಸಮಾಧಾನವನ್ನು ಕಡಿಮೆ ಮಾಡ­ಬೇಕು. ಇಂಥ ವರ್ಗಾವಣೆಯಿಂದ ತೆರವಾಗುವ ಜಾಗಕ್ಕೆ ಹೊಸ ನೇಮಕಗಳನ್ನು ಮಾಡಬೇಕು. ನಿಯಮ ಅಂತ ಅದಕ್ಕೇ ಜೋತು ಬೀಳುವುದು ಚಲನ­ಶೀಲ ಸರ್ಕಾರದ ಲಕ್ಷಣವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT