ರಾಜ್ಯ ರಸ್ತೆ ಸಾರಿಗೆಯ ವಿವಿಧ ನಿಗಮಗಳಲ್ಲಿ ಕೆಲಸ ಮಾಡುವ ಚಾಲಕ, ನಿರ್ವಾಹಕ ಹಾಗೂ ಇತರ ಕುಶಲ ಕರ್ಮಿಗಳಿಗೆ, ಅಂತರ ವಿಭಾಗೀಯ ವರ್ಗಾವಣೆ ಆಗುತ್ತಿಲ್ಲ. ಇದಕ್ಕೆ ಅವಕಾಶ ಕಲ್ಪಿಸಬೇಕು. ಈ ಸಾರಿಗೆ ನಿಗಮಗಳಲ್ಲಿ 10 ವರ್ಷಗಳಿಗಿಂತ ಹೆಚ್ಚು ಅವಧಿಯ ಸೇವೆ ಸಲ್ಲಿಸಿದ ಹಾಗೂ ಆನಾರೋಗ್ಯ, ಮಕ್ಕಳ ವಿವಾಹ, ಶಿಕ್ಷಣ ಮುಂತಾದ ಪ್ರಮಾಣಿಕ ಕಾರಣಗಳಿಂದ ವರ್ಗಾವಣೆ ಬಯಸುವವರಿಗೆ, ವರ್ಗಾವಣೆ ಮಾಡಬೇಕು.
ಬರೀ ಘೋಷಣೆ ಮಾಡುವುದರಲ್ಲೇ, ವರದಿ ತರಿಸುವುದರಲ್ಲೇ ಕಾಲ ಕಳೆಯುವ ಸಾರಿಗೆ ಮಂತ್ರಿಗಳು ಇತ್ತ ಗಮನ ಕೊಡಬೇಕು. ಈ ಸಂಬಂಧ ಸಿಬ್ಬಂದಿಯಲ್ಲಿರುವ ಅಸಮಾಧಾನವನ್ನು ಕಡಿಮೆ ಮಾಡಬೇಕು. ಇಂಥ ವರ್ಗಾವಣೆಯಿಂದ ತೆರವಾಗುವ ಜಾಗಕ್ಕೆ ಹೊಸ ನೇಮಕಗಳನ್ನು ಮಾಡಬೇಕು. ನಿಯಮ ಅಂತ ಅದಕ್ಕೇ ಜೋತು ಬೀಳುವುದು ಚಲನಶೀಲ ಸರ್ಕಾರದ ಲಕ್ಷಣವಲ್ಲ.