ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಚುನಾವಣೆ ಅಂಗವಾಗಿ ಮೊದಲ ಚುನಾವಣಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಪ್ರಜಾಪ್ರಭುತ್ವ, ಮಾನವೀಯತೆ ಹಾಗೂ ಕಾಶ್ಮೀರಿಯತೆ- ಅಟಲ್ಜೀ ಅವರ ಈ ಪದಗಳು ಕಾಶ್ಮೀರಿಗರ ಹೃದಯಗಳಲ್ಲಿ ಸ್ಥಾನ ಗಳಿಸಿವೆ. ಅವು ಕಾಶ್ಮೀರಿ ಯುವಕರಲ್ಲಿ ಉತ್ತಮ ಭವಿಷ್ಯದ ಬಗ್ಗೆ ಭರವಸೆಯನ್ನು ಒಡಮೂಡಿಸಿವೆ’ ಎಂದು ನುಡಿದರು.