ಮಾನವ ಸಂಪನ್ಮೂಲ ನಿರ್ವಹಣೆಯು (ಎಚ್ಆರ್ಎಂಎಸ್) ಸರ್ಕಾರಿ ನೌಕರರ ಸೇವಾ ದಾಖಲೆ- ವಿವರ ನಿರ್ವಹಣೆಗೆ ಇರುವ ಅತ್ಯುತ್ತಮ ವಿದ್ಯುನ್ಮಾನ ವ್ಯವಸ್ಥೆ. ಈ ವ್ಯವಸ್ಥೆ ಬಂದ ನಂತರ ಕೈಬರಹದಲ್ಲಿ ಆಗುತ್ತಿದ್ದ ಹಲವಾರು ಅವಾಂತರಗಳು ತಪ್ಪಿವೆ. ಆದರೆ ಇದರಲ್ಲಿ ಏನಾದರೂ ತಪ್ಪಾಗಿ ದಾಖಲಾದರೆ ಸರಿಪಡಿಸಿಕೊಳ್ಳುವುದು ತುಂಬಾ ಕಷ್ಟ. ರಾಜ್ಯದ ಎಲ್ಲ ತಿದ್ದುಪಡಿ ಪ್ರಕರಣಗಳನ್ನೂ ಬೆಂಗಳೂರಿನ ಘಟಕದಲ್ಲೇ ನಿರ್ವಹಿಸಲಾಗುತ್ತಿದೆ.
ಈ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ ಜಿಲ್ಲಾ ಮಟ್ಟದಲ್ಲಿ ಎಚ್ಆರ್ಎಂಎಸ್ ಘಟಕಗಳನ್ನು ತೆರೆದರೆ ಅನವಶ್ಯಕ ವಿಳಂಬ, ದೂರದ ಜಿಲ್ಲೆಗಳಿಂದ ಬರಲು ತಗಲುವ ಖರ್ಚು, ಶ್ರಮ, ಕಿರಿಕಿರಿ ಎಲ್ಲವೂ ತಪ್ಪುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನೌಕರರಿಗೆ ನಿಗದಿತ ಅವಧಿಯಲ್ಲಿ ಪಗಾರ ಕೈಗೆ ಸಿಕ್ಕಿ ನಿರುಮ್ಮಳವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುತ್ತದೆ.