ಹೊನ್ನಾವರ (ಉತ್ತರ ಕನ್ನಡ): ರಾಮಚಂದ್ರಾಪುರ ಮಠದ ರಾಘ-ವೇಶ್ವರ ಭಾರತೀ ಸ್ವಾಮೀಜಿಯವರಿಗೆ ಬ್ಲ್ಯಾಕ್ಮೇಲ್ ಮಾಡಿದ ಆರೋ-ಪದ ಮೇಲೆ ಬಂಧಿತರಾಗಿರುವ ದಿವಾಕರ ಶಾಸ್ತ್ರಿ ಹಾಗೂ ಅವರ ಪತ್ನಿ ಗಾಯಕಿ ಪ್ರೇಮಲತಾ ಅವರ ಜಾಮೀನು ಅರ್ಜಿಯ ವಿಚಾರಣೆ-ಯನ್ನು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.
ಶನಿವಾರ ನಡೆದ ವಿಚಾರಣೆ ನಂತರ ನ್ಯಾಯಾಧೀಶ ಅನಿಲ್ಪ್ರಕಾಶ ಅವರು ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.