ಎಂ.ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ವಾಸ್ತುಶಿಲ್ಪ ವಿಭಾಗದಲ್ಲಿ ಇತ್ತೀಚೆಗೆ ವಿಶಿಷ್ಠ ಕಲಾಕೃತಿಗಳ ಲೋಕವೇ ತೆರೆದುಕೊಂಡಿತ್ತು. ಕಣ್ಣಿನಾಕಾರದ ಬೋಟಿನಲ್ಲಿ ಕೂತ ಲಲನೆಯರೂ ಅದರ ಭಾಗದಂತ ಭಾಸವಾದರೆ, ಆಟೊದಲ್ಲಿ ಲೈಟಿನ ಸರ ಹಿಡಿದ ಹುಡುಗಿಯರ ಮುಖದಲ್ಲೂ ನಗುವಿವಿನ ದೀಪ ಬೆಳಗುತ್ತಿತ್ತು. ‘ಇನ್ಸ್ಪಿರಿಟ್ 2015’ ಎಂಬ ಈ ಕಾರ್ಯಕ್ರಮದಲ್ಲಿ ಸತೀಶ ಬಡಿಗೇರ್ ಸೆರೆಹಿಡಿದ ಈ ಚಿತ್ರಗಳು ಕಲಾಕೃತಿಗಳಲ್ಲ, ಬದಲಿಗೆ ವಾಸ್ತುಶಿಲ್ಪ ವಿದ್ಯಾರ್ಥಿಗಳ ಸೃಜನಶೀಲತೆಯ ಮೂಸೆಯಲ್ಲಿ ಅರಳಿದ ವಿವಿಧ ಮಾದರಿಗಳು.