ಬೆಂಗಳೂರು: ಉತ್ಸವ, ಮೆರವಣಿಗೆಗಳ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಅವಘಡಗಳು ಸಂಭವಿಸುವುದನ್ನು ತಡೆಯಲು ಮೂರ್ತಿ ಹಾಗೂ ಹಿಂಭಾಗದ ಅಲಂಕಾರ ಫಲಕಗಳ ಎತ್ತರಕ್ಕೆ ಮಿತಿ ವಿಧಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
‘ಈಗ ಗಣೇಶೋತ್ಸವ. ರಥೋತ್ಸವ ಮತ್ತಿತರ ಮೆರವಣಿಗೆಗಳಲ್ಲಿ ಬಳಸುವ ಮೂರ್ತಿ, ಅಲಂಕಾರ ಫಲಕಗಳಿಗೆ ಮಿತಿ ಇಲ್ಲ. ಇದರಿಂದಾಗಿ ಅವಘಡಗಳು ಸಂಭವಿಸುತ್ತಿವೆ. ಹತ್ತು ಅಡಿ ಎತ್ತರ ಮಿತಿ ವಿಧಿಸುವ ಯೋಚನೆ ಇದೆ. ಪೊಲೀಸ್ ಇಲಾಖೆ ಜೊತೆ ಚರ್ಚಿಸಿದ ಬಳಿಕ ತೀರ್ಮಾನಿಸಲಾಗುವುದು’ಎಂದರು.