ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಪ್ರವಹಿಸಿ ಯುವಕ ಸಾವು

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಲಾಸಿಪಾಳ್ಯ ಸಮೀಪದ ಮೋತಿನಗರದ ಸಾರ್ವಜನಿಕ ಶೌಚಾಲ­ಯದಲ್ಲಿ ಶನಿವಾರ ವಿದ್ಯುತ್‌ ಪ್ರವಹಿಸಿ ಪ್ರಕಾಶ್‌ಕುಮಾರ್‌ (20) ಎಂಬುವರು ಮೃತಪಟ್ಟಿದ್ದಾರೆ. ರಾಜಸ್ತಾನ ಮೂಲದ ಅವರು ಮೋತಿ­ನಗರದಲ್ಲಿನ ಪೈಪ್‌ ಅಂಗಡಿ­ಯೊಂ­ದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಂಗಡಿ ಸಮೀಪದ ಶೌಚಾಲ­ಯದಲ್ಲಿ ಸಂಜೆ ಮೂತ್ರವಿಸರ್ಜನೆ ಮಾಡಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.

ಶೌಚಾಲಯಕ್ಕೆ ಕಬ್ಬಿಣದ ಗೇಟ್‌ ಅಳವಡಿಸಿದ್ದು, ಆ ಗೇಟ್‌ನ ಪಕ್ಕದಲ್ಲೇ ವಿದ್ಯುತ್‌ ಕಂಬವಿದೆ. ಸಂಜೆ ಮಳೆ ಬಂದಿದ್ದರಿಂದ ಕಂಬದಲ್ಲಿ ಗ್ರೌಂಡಿಂಗ್‌ ಆಗಿ ಗೇಟ್‌ಗೆ ವಿದ್ಯುತ್‌ ಪ್ರವಹಿಸುತ್ತಿತ್ತು. ಅದೇ ವೇಳೆಗೆ ಶೌಚಾಲಯದ ಬಳಿ ಬಂದ ಪ್ರಕಾಶ್‌ಕುಮಾರ್‌, ಗೇಟ್‌ ಮುಟ್ಟುತ್ತಿ­ದ್ದಂತೆ ಅವರಿಗೆ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀ­ಸರು, ಬೆಸ್ಕಾಂ ಹಾಗೂ ಶೌಚಾ­ಲ­ಯದ ನಿರ್ವಹಣೆಯ ಹೊಣೆ ಹೊತ್ತಿ­ರುವ ಬಿಬಿಎಂಪಿ ವಿರುದ್ಧ ನಿರ್ಲಕ್ಷ್ಯ ಆರೋ­ಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT