ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೋದ್‌ ಖನ್ನಾ ಮೇಲೆ ದೂರು

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಚಂಡಿಗಡ (ಪಿಟಿಐ): ಅಂತರ್ಜಾಲ ಸಾಮಾಜಿಕ ತಾಣದ ಮೂಲಕ ಪ್ರಚೋದನಾಕಾರಿ ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಯೂ ಆದ ನಟ ವಿನೋದ್‌ ಖನ್ನಾ ಅವರ ವಿರುದ್ಧ ಆರೋಪ ಹೊರಿಸಿರುವ ಕಾಂಗ್ರೆಸ್‌, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಗುರುದಾಸ್‌ಪುರ ಕ್ಷೇತ್ರದ ಅಭ್ಯರ್ಥಿ ವಿನೋದ್ ಖನ್ನಾ ಅವರ ಒತ್ತಾಸೆ ಮೇರೆಗೆ ಧರ್ಮಗಳ ಮಧ್ಯೆ ದ್ವೇಷ ಬಿತ್ತುವ ಮತ್ತು ಕೋಮುಗಲಭೆಗೆ ಚಿತಾವಣೆ ಮಾಡುವ ಉದ್ದೇಶದಿಂದ ಪಠಾಣ್‌ಕೋಟ್ ಯುವಮೋರ್ಚಾದ ಉಪಾಧ್ಯಕ್ಷ ಸಂಜಯ್‌ ಶರ್ಮಾ ಅವರು  ಸಾಮಾಜಿಕ ಅಂತರ್ಜಾಲ ತಾಣ ‘ವಾಟ್ಸ್‌ಅ್ಯಪ್‌’ ಮೂಲಕ ಸಂದೇಶ ಕಳುಹಿಸಿದ್ದಾರೆ. ಆದ್ದರಿಂದ ಖನ್ನಾ ಅವರನ್ನು ಉಮೇದುವಾರಿಕೆಯಿಂದ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ಕಾಂಗ್ರೆಸ್‌ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT