ಚೆನ್ನೈ (ಪಿಟಿಐ): ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಎರಡು ಅನಾಥ ಬ್ಯಾಗ್ಗಳು ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆಯಿತು.
ದೆಹಲಿಯಿಂದ ಮಧುರೆಗೆ ಬಂದಿದ್ದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಕಾರನ್ನು ನಿಲ್ಲಿಸಿದ್ದ ಸಮೀಪದಲ್ಲಿ ಎರಡು ಅನಾಥ ಬ್ಯಾಗ್ಗಳು ಪತ್ತೆಯಾದವು.
ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಬ್ಯಾಗ್ಗಳನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸಿದಾಗ, ಒಂದು ಮಹಿಳೆಯೊಬ್ಬರ ಬ್ಯಾಗ್ ಆಗಿದ್ದರೆ, ಇನ್ನೊಂದರಲ್ಲಿ ಲ್ಯಾಪ್ಟಾಪ್ ಹಾಗೂ ಮೊಬೈಲ್ ಫೋನ್ ಇತ್ತು. ತನಿಖೆ ಬಳಿಕ ಬ್ಯಾಗ್ನ್ನು ಮಹಿಳೆಗೆ ಹಿಂತಿರುಗಿಸಲಾಯಿತು. ಇನ್ನೊಂದು ಬ್ಯಾಗ್ ಭದ್ರತಾ ಸಿಬ್ಬಂದಿ ವಶದಲ್ಲಿದೆ.