ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ ಅನಾಥ ಬ್ಯಾಗ್‌ ಪತ್ತೆ

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಇಲ್ಲಿನ ವಿಮಾನ ನಿಲ್ದಾಣದಲ್ಲಿ  ವಾರಸುದಾರ­ರಿಲ್ಲದ ಎರಡು ಅನಾಥ ಬ್ಯಾಗ್‌­ಗಳು ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆಯಿತು.

ದೆಹಲಿಯಿಂದ ಮಧುರೆಗೆ ಬಂದಿದ್ದ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರ ಕಾರನ್ನು ನಿಲ್ಲಿಸಿದ್ದ ಸಮೀಪದಲ್ಲಿ ಎರಡು ಅನಾಥ ಬ್ಯಾಗ್‌ಗಳು ಪತ್ತೆ­ಯಾ­ದವು.

ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಆಗ­ಮಿಸಿ ಬ್ಯಾಗ್‌ಗಳನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸಿದಾಗ, ಒಂದು ಮಹಿಳೆ­ಯೊಬ್ಬರ ಬ್ಯಾಗ್‌ ಆಗಿದ್ದರೆ, ಇನ್ನೊಂದ­ರಲ್ಲಿ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ ಫೋನ್‌ ಇತ್ತು.  ತನಿಖೆ ಬಳಿಕ ಬ್ಯಾಗ್‌ನ್ನು ಮಹಿಳೆಗೆ ಹಿಂತಿ­­ರುಗಿಸ­ಲಾಯಿತು. ಇನ್ನೊಂದು ಬ್ಯಾಗ್‌ ಭದ್ರತಾ ಸಿಬ್ಬಂದಿ ವಶದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT