ನವದೆಹಲಿ: ‘ಪೊಲೀಸ್ ಇಲಾಖೆ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆನ್ನಲಾದ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮಗ ಗೃಹ ಸಚಿವರು ತಮ್ಮ ಕಚೇರಿ ಹೊರಗೆ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ಗೃಹ ಸಚಿವಾಲಯದ ವ್ಯವಹಾರದಲ್ಲಿ ಕೈ ಹಾಕುತ್ತಿದ್ದಾರೆನ್ನಲಾದ ಗೃಹ ಸಚಿವರ ಮಗ ಪಂಕಜ್ ಅವರನ್ನು ಪ್ರಧಾನಿ ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ’ ಎನ್ನುವ ಸುದ್ದಿ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಸುತ್ತು ಹೊಡೆಯುತ್ತಿದೆ.
ಆದರೆ, ಈ ಸುದ್ದಿಗೆ ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲ. ‘ಇದೊಂದು ಆಧಾರರಹಿತವಾದ, ದುರುದ್ದೇಶದಿಂದ ಕೂಡಿದ ಆರೋಪ’. ಕಳೆದ 15– 20 ದಿನಗಳಿಂದ ಇಂತಹ ವದಂತಿ ಹರಡಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ. ಇದು ಎಂದಾದರೂ ಅಂತ್ಯಗೊಳ್ಳಲೇಬೇಕು. ಅನಗತ್ಯವಾಗಿ ಕೆಲವರು ತಮ್ಮ ಕುಟುಂಬದ ಸದಸ್ಯರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಧಾನಿಗೆ ದೂರು: ತಮ್ಮ ಹಾಗೂ ಕುಟುಂಬ ಸದಸ್ಯರ ವಿರುದ್ಧ ವದಂತಿ ಹಬ್ಬಿಸುತ್ತಿರುವ ಮುಖಂಡರ ಹೆಸರನ್ನು ಅವರು ನಾಯಕರ
ಮುಂದೆ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ಅವರಿಗೂ ದೂರು ಸಲ್ಲಿಸಿದ್ದಾರೆ. ಇದರ ಹಿಂದೆ ಹಿರಿಯ ಸಚಿವ ಸಹೋದ್ಯೋಗಿಯೊಬ್ಬರ ಕೈವಾಡವಿದೆ ಎಂದು ಅವರು ಬಹಿರಂಗಪಡಿಸಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.
‘ರಾಜನಾಥ್ಸಿಂಗ್ ಮಗನ ಮೇಲೆ ಮಾಡಲಾಗಿರುವ ಆರೋಪ ಮೋದಿ ಸರ್ಕಾರದಲ್ಲಿ ನಡೆಯುತ್ತಿರುವ ಅಧಿಕಾರ ಕಿತ್ತಾಟದ ದ್ಯೋತಕವಾಗಿದೆ. ಹೊಸ ಸರ್ಕಾರದಲ್ಲಿ ಒಗ್ಗಟ್ಟಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ’ ಎಂದು ರಾಜಧಾನಿ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ರಾಜನಾಥ್ಸಿಂಗ್ ಲೋಕಸಭೆ ಉಪ ನಾಯಕರಾಗಿ ನೇಮಕವಾದ ಬಳಿಕ ಇಂಥ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.
ತಮ್ಮ ಪುತ್ರನ ವಿರುದ್ಧ ಮಾಡಲಾಗಿರುವ ಆರೋಪ ಕುರಿತು ಪ್ರಧಾನಿ ಹಾಗೂ ಬಿಜೆಪಿ ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ರಾಜನಾಥ್ ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ಕಚೇರಿ ಆರೋಪವನ್ನು ಬಲವಾಗಿ ನಿರಾಕರಿಸಿದೆ.
‘ಇದೊಂದು ದುರುದ್ದೇಶದಿಂದ ಕೂಡಿದ ಸುಳ್ಳು ಆರೋಪ. ಎನ್ಡಿಎ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಮಾಡುವ ಕುತಂತ್ರದಿಂದ ಕೂಡಿದೆ’ ಎಂದು ಪ್ರಧಾನಿ ಕಚೇರಿ ಪ್ರತಿಕ್ರಿಯಿಸಿದೆ.
ಕುತಂತ್ರದ ಆರೋಪ ಇದೊಂದು ದುರುದ್ದೇಶದಿಂದ ಕೂಡಿದ ಸುಳ್ಳು ಆರೋಪ. ಎನ್ಡಿಎ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಮಾಡುವ ಕುತಂತ್ರದಿಂದ ಕೂಡಿದೆ -ಪ್ರಧಾನಿ ಕಾರ್ಯಾಲಯ |
ಸಚಿವ ಸಂಪುಟದ ಸದಸ್ಯರ ವರ್ಚಸ್ಸಿಗೆ ಧಕ್ಕೆ ಮಾಡುವ ನಡವಳಿಕೆಯನ್ನು ಸಹಿಸುವುದಿಲ್ಲ ಎಂದೂ ಪ್ರಧಾನಿ ಕಚೇರಿ ಎಚ್ಚರಿಕೆ ನೀಡಿದೆ.
ರಾಜನಾಥ್ಸಿಂಗ್ ದಕ್ಷ, ಪ್ರಾಮಾಣಿಕ ಹಾಗೂ ಸಜ್ಜನ ರಾಜಕಾರಣಿ. ಅವರ ಹೆಸರಿಗೆ ಕಳಂಕ ಹಚ್ಚಲು ವದಂತಿ ಹರಡಲಾಗಿದೆ. ಇದರಿಂದ ವೈಯಕ್ತಿಕವಾಗಿ ನೋವಾಗಿದೆ ಎಂದು ಅಮೀತ್ ಷಾ ಹೇಳಿದ್ದಾರೆ.
ಕೆಲವು ಮಾಧ್ಯಮಗಳು ಆಧಾರಗಳಿಲ್ಲದ ವರದಿ ಪ್ರಕಟಿಸುತ್ತಿವೆ ಎಂದು ಬಿಜೆಪಿ ಅಧ್ಯಕ್ಷರು ಆಕ್ಷೇಪ ಎತ್ತಿದ್ದಾರೆ. ಮೋದಿ ಸಂಪುಟದ ಸದಸ್ಯರನ್ನು ಗುರಿ ಮಾಡಿಕೊಂಡು ಪತ್ರಿಕೆಗಳು ವರದಿ ಪ್ರಕಟಿಸುತ್ತಿವೆ ಎಂದೂ ಟೀಕಿಸಿದ್ದಾರೆ.
ಇದಕ್ಕೂ ಮೊದಲು ನಿತಿನ್ ಗಡ್ಕರಿ ಮನೆಯಲ್ಲಿ ಕದ್ದಾಲಿಕೆ ಉಪಕರಣ ಅಳವಡಿಸಲಾಗಿದೆ ಎಂಬ ಸುದ್ದಿಗಳು ಪ್ರಕಟವಾಗಿದ್ದವು. ಅನಂತರ ಈ ವರದಿಯನ್ನು ಸರ್ಕಾರ ನಿರಾಕರಿಸಿತ್ತು.
ಗೃಹ ಸಚಿವಾಲಯದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ರಾಜನಾಥ್ ಸಿಂಗ್ ಅವರ ಮಗ ಪಂಕಜ್ ಅವರನ್ನು ಪ್ರಧಾನಿ ಈಚೆಗೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಅಪ್ಪನ ವ್ಯವಹಾರದಲ್ಲಿ ಮೂಗು ತೂರಿಸಿದಂತೆ ಎಚ್ಚರಿಕೆ ನೀಡಿದ್ದಾರೆಂಬ ಸುದ್ದಿ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅಲ್ಲದೆ, ಕೆಲವು ಸಚಿವರ ನಡವಳಿಕೆ ಕುರಿತು ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ವರದಿಗಳೂ ಪ್ರಕಟವಾಗಿದ್ದವು.
ಸಂಬಂಧಿತ ಸುದ್ದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.