ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಸೃಷ್ಟಿಸಿದ ಸಂಸದರ ಹೇಳಿಕೆ

Last Updated 17 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಉತ್ತರ ಪ್ರದೇಶದಲ್ಲಿ ಮಹಿಳೆಯರ  ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಆಡಳಿತಾರೂಢ ಸಮಾಜವಾದಿ ಪಕ್ಷದ ಸಂಸದ ನರೇಶ್‌್ ಅಗರವಾಲ್ ನೀಡಿದ ಹೇಳಿಕೆ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.

ಬದಾಯೂಂ ಜಿಲ್ಲೆಯ ಗ್ರಾಮ­ವೊಂ­ದರಲ್ಲಿ ಇತ್ತೀಚೆಗೆ ಮಹಿಳೆ ಮೇಲೆ ನಡೆದ ಅತ್ಯಾಚಾರ ಕುರಿತು ಅವರು ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ‘ಬೇರೊಬ್ಬರ ಸಾಕು ಪ್ರಾಣಿಗಳನ್ನು ಕೂಡ ಬಲವಂತದಿಂದ ಎಳೆದೊಯ್ಯ­ಲಾ­ಗದು. ಬಲವಂತ ಮಾಡಿ­ದರೆ ಪ್ರಾಣಿ­ಗಳು ನಮ್ಮೊಂದಿಗೆ ಬರ­ಲಾರವು’ ಎಂದು ಸಂಸದ ಅಗರ­ವಾಲ್‌ ಖಾಸಗಿ ಸುದ್ದಿ ವಾಹಿನಿ­ಗೆ ಸೋಮ­ವಾರ ನೀಡಿದ ಸಂದರ್ಶನದಲ್ಲಿ ಹೇಳಿ­ದ್ದರು.

ಅನೇಕ ಮಹಿಳಾ ಸಂಘಟನೆಗಳು, ರಾಜಕೀಯ ಪಕ್ಷಗಳು, ಸಂಸದರ ಈ ಹೇಳಿಕೆಯನ್ನು ‘ನಾಚಿಕೆಗೇಡು ಹಾಗೂ ಕೀಳು ಅಭಿರುಚಿ ಪ್ರತೀಕ’ ಎಂದು ಕಟುವಾಗಿ ಟೀಕಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT