ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಹಾರಕ್ಕೆಂದು ಬಂದ ಮೂವರು ನೀರುಪಾಲು

Last Updated 21 ಏಪ್ರಿಲ್ 2015, 11:26 IST
ಅಕ್ಷರ ಗಾತ್ರ

ಹಿರಿಯೂರು: ವಿಹಾರಕ್ಕೆಂದು ಶಿರಾ ಪಟ್ಟಣದಿಂದ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪದ ಗಾಯತ್ರಿ ಜಲಾಶಯಕ್ಕೆ ಬಂದ ಮೂವರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಜಮೀರ್ ಎಂಬುವವರ ಮಗಳು ಸನಾ (12), ಅಫ್ಸಾನಾ (14) ಹಾಗೂ ಆಕೆಯ ತಂದೆ ಶಬ್ಬೀರ್ ಸಾಬ್ (35) ಮೃತಪಟ್ಟವರು.

ಶಿರಾ ಪಟ್ಟಣದಿಂದ 25–30 ಜನರಿದ್ದ ಕುಟುಂಬ ಸದಸ್ಯರು ಗಾಯತ್ರಿ ಜಲಾಶಯ ನೋಡಲು ಬಂದಿದ್ದರು.

ಜಲಾಶಯದ ನೀರಿನಲ್ಲಿ ಮುಖ ತೊಳೆಯಲು ಹೋಗಿದ್ದ  ಸನಾ ಮತ್ತು ಅಫ್ಸಾನ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿದ್ದ ಶಬ್ಬೀರ್ ಅವರನ್ನು ಹುಡುಗಿಯರಿಬ್ಬರೂ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅವರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT