ಕತ್ರಿಗುಪ್ಪೆ ಕಡೆಯಿಂದ ಆರಂಭಿಸಿ ಕೆಲವು ಬಸ್ಸುಗಳು ಹನುಮಂತನಗರ ಮಾರ್ಗವಾಗಿ ಕೋಲಾರ, ಮುಳಬಾಗಿಲು, ಪಲಮನೇರ್, ಚಿತ್ತೂರು, ಕಾಳಹಸ್ತಿಗಳ ಕಡೆಗೆ ಪ್ರತಿ ದಿವಸ ಸಂಚರಿಸುತ್ತವೆ. ಇದರಿಂದ ಬಹಳಷ್ಟು ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಹಾಗೆಯೇ ಕೆಲವು ಬಸ್ಸುಗಳು ಶ್ರೀನಗರ ಬಸ್ ನಿಲ್ದಾಣದಿಂದ ನಾಗಮಂಗಲ, ಮೇಲುಕೋಟೆಗೆ ಹೋಗುತ್ತವೆ. ಆದರೆ ಈ ಬಸ್ಸುಗಳು ಎಷ್ಟು ಹೊತ್ತಿಗೆ ಹೋಗುತ್ತವೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ.
ಸಾರಿಗೆ ಅಧಿಕಾರಿಗಳು ಈ ಬಗ್ಗೆ ಪ್ರಯಾಣಿಕರಿಗೆ ಸರಿಯಾಗಿ ಮಾಹಿತಿ ನೀಡುವ ವೇಳಾಪಟ್ಟಿಯನ್ನು ವಿದ್ಯಾಪೀಠ ಸರ್ಕಲ್, ಶ್ರೀನಿವಾಸನಗರ, ಹನುಮಂತನಗರ ಹಾಗೂ ಶ್ರೀನಗರ ನಗರ ತಂಗುದಾಣಗಳ ಬಳಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಜೊತೆಗೆ ಆ ವೇಳಾಪಟ್ಟಿಯಂತೆ ಬಸ್ಸುಗಳು ಸಂಚರಿಸುವ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
-ಎ. ಕೆ. ಅನಂತಕುಮಾರ್