ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಳಾಪಟ್ಟಿ ಬಗ್ಗೆ ಮಾಹಿತಿ ನೀಡಿ

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಕತ್ರಿಗುಪ್ಪೆ ಕಡೆಯಿಂದ ಆರಂಭಿಸಿ ಕೆಲವು ಬಸ್ಸುಗಳು ಹನುಮಂತನಗರ ಮಾರ್ಗವಾಗಿ  ಕೋಲಾರ, ಮುಳಬಾಗಿಲು, ಪಲಮನೇರ್‌, ಚಿತ್ತೂರು, ಕಾಳಹಸ್ತಿಗಳ ಕಡೆಗೆ ಪ್ರತಿ ದಿವಸ ಸಂಚರಿಸುತ್ತವೆ. ಇದರಿಂದ ಬಹಳಷ್ಟು ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಹಾಗೆಯೇ ಕೆಲವು ಬಸ್ಸುಗಳು ಶ್ರೀನಗರ ಬಸ್‌ ನಿಲ್ದಾಣದಿಂದ ನಾಗಮಂಗಲ, ಮೇಲುಕೋಟೆಗೆ ಹೋಗುತ್ತವೆ. ಆದರೆ ಈ ಬಸ್ಸುಗಳು ಎಷ್ಟು ಹೊತ್ತಿಗೆ ಹೋಗುತ್ತವೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ಸಾರಿಗೆ ಅಧಿಕಾರಿಗಳು ಈ ಬಗ್ಗೆ ಪ್ರಯಾಣಿಕರಿಗೆ ಸರಿಯಾಗಿ ಮಾಹಿತಿ ನೀಡುವ ವೇಳಾಪಟ್ಟಿಯನ್ನು ವಿದ್ಯಾಪೀಠ ಸರ್ಕಲ್‌, ಶ್ರೀನಿವಾಸನಗರ, ಹನುಮಂತನಗರ ಹಾಗೂ ಶ್ರೀನಗರ ನಗರ   ತಂಗುದಾಣಗಳ ಬಳಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಜೊತೆಗೆ  ಆ ವೇಳಾಪಟ್ಟಿಯಂತೆ  ಬಸ್ಸುಗಳು ಸಂಚರಿಸುವ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
-ಎ. ಕೆ. ಅನಂತಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT