ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಈ ನಾಲ್ವರೂ ಮೇ 23ರಂದು 22 ಮಂದಿ ಯಾತ್ರಾತ್ರಿಗಳ ಜತೆಗೆ ಬಾಗ್ದಾದ್ನ ಯಾತ್ರ ಸ್ಥಳಕ್ಕೆ ಭೇಟಿ ನೀಡಿದ್ದರು. ಅದಾದ ಮರುದಿನ ಆರಿಫ್ ಮನೆಗೆ ಕರೆ ಮಾಡಿ, ಮೊದಲೆ ತಿಳಿಸದೆ ಯಾತ್ರೆಗೆ ಹೊರಟ ಬಗ್ಗೆ ಕ್ಷಮೆ ಕೋರಿದ್ದ. ಆ ಬಳಿಕ ಆಗಸ್ಟ್ 26ರಂದು ಆರಿಫ್ ತಂದೆಗೆ ಕರೆ ಮಾಡಿದ್ದ ಶಹೀನ್ ಟಂಕಿ, ಐಎಸ್ಐಎಸ್ಗಾಗಿ ಸಿರಿಯಾದಲ್ಲಿ ಹೋರಾಡುವಾಗ ಆರಿಫ್ ಹುತಾತ್ಮನಾದ ಎಂದು ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.