ನವದೆಹಲಿ: ಬಹುಕೋಟಿ ರೂಪಾಯಿ ಮೊತ್ತದ ಶಾರದಾ ಚಿಟ್ ಫಂಡ್ ಹಗರಣದ ತನಿಖೆಗೆ ಸಂಬಂಧಿಸಿ ಸಿಬಿಐ ಬುಧವಾರ ಒಂದೇ ದಿನ 46 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕುನಾಲ್ ಘೋಷ್ ಅವರನ್ನು ಆರೋಪಿಯನ್ನಾಗಿ ಹೆಸರಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಸೆಬಿ, ಆರ್ಬಿಐ, ಕಾರ್ಪೋರೇಟ್್ ವ್ಯವಹಾರಗಳ ಸಚಿವಾಲಯದ ಪಾತ್ರವನ್ನು ತನಿಖೆ ಮಾಡಲಾಗುವುದು ಎಂದು ಸಿಬಿಐ ಹೇಳಿದೆ.