ಮಹಾನಗರದಲ್ಲಿ, ದುಡ್ಡು ಯಾರು ಬೇಕಾದರೂ ಗಳಿಸಬಹುದು; ನ್ಯಾಯವಾಗೂ ಸಂಪಾದಿಸಬಹುದು. ಮನುಷ್ಯರಾಗಿ ಬದುಕುವುದೇ ಮೂಲ ಸಮಸ್ಯೆ. ಮನೆಯಿಂದ ಕದ್ದೋಡಿಬಂದ 12 ವರ್ಷದ ಚೂಟಿ ಹುಡುಗನ ಕತೆ (ಪ್ರ.ವಾ., ಏ.೨೧), ಇದಕ್ಕೆ ಉದಾಹರಣೆ.
ಧೈರ್ಯ, ಸಾಹಸ, ಕಾಮನ್ಸೆನ್ಸ್ ಇದ್ದ ಹುಡುಗ, ಓಡಿ ಬಂದದ್ದು, ಶಾಲಾ ಮಟ್ಟದ ಪರೀಕ್ಷೆ ಭಯದಿಂದಂತೆ! ಇಂಥದು ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆ. ಛಲ–-ಸಾಹಸಗಳನ್ನುಳ್ಳ ಎಷ್ಟೆಷ್ಟು ಬುದ್ಧಿವಂತ ಮಕ್ಕಳನ್ನು ಈ ಅರ್ಥರಹಿತ ಶಿಕ್ಷಣ, ಪರೋಕ್ಷವಾಗಿ ಕ್ರೈಂ ಕೂಪಕ್ಕೆ ತಳ್ಳುತ್ತಿದೆಯೋ? ಮಕ್ಕಳನ್ನು ಶಾಲೆಗೆ ಕಳಿಸುವುದು, ಅವರು ಮನುಷ್ಯ ಸಮಾಜದ ಅಂಗವಾಗಿ ಬದುಕುವ ಶಿಸ್ತು, ಸಂಯಮ ಕಲಿಯುವುದಕ್ಕೆ; ಸಾಫ್ಟ್ವೇರ್ ಎಂಜಿನಿಯರ್ ಆಗುವುದು ಆಮೇಲಿನ ಮಾತು.
ಮನುಷ್ಯತ್ವದ ಮೌಲ್ಯ, ತಂದೆ-ತಾಯಿಗಳಿಗೆ ಮೊದಲು ಗೊತ್ತಿರಬೇಕಲ್ಲ?! ಈ ಹುಡುಗನ ಸಾಹಸ ಇತರೆ ಮಕ್ಕಳಿಗೆ ಪ್ರೇರಣೆ ಆಗಬಾರದು.