ಪ್ರಭಾವಿ ಮಹಿಳೆ ಮಾಯಾವತಿ ಅವರ ಬಗ್ಗೆ ಬಿಜೆಪಿಯಿಂದ ವಜಾಗೊಂಡಿರುವ ಮುಖಂಡ ದಯಾಶಂಕರ್ ಸಿಂಗ್ ಅವಾಚ್ಯ ಪದಗಳನ್ನು ಬಳಸಿರುವುದು ಖಂಡನೀಯ.
ಬಿಜೆಪಿಯ ಘನತೆಗೆ ಇದರಿಂದ ಧಕ್ಕೆಯಾಗಿದೆ. ಯಾವುದೇ ಮಹಿಳೆ ಇಂಥ ಮಾತು ಕೇಳಿ ಸುಮ್ಮನಿರಲು ಸಾಧ್ಯವಿಲ್ಲ. ಸಿಂಗ್ ಅವರು ಇಡೀ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ. ಬಿಜೆಪಿ ಆ ರಾಜ್ಯದಲ್ಲಿ ಗೆಲ್ಲಲು ಹೂಡಿರುವ ತಂತ್ರಗಳಿಗೆ ಈ ಮಾತೇ ಕಡಿವಾಣ ಹಾಕಿದೆ.