ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಶನಿವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಸರ್ಕಾರಿ ಫಾರ್ಚುನರ್ ಕಾರಿಗೆ ಬೆಂಗಳೂರಿನಿಂದ ಬರುತ್ತಿದ್ದ ಸ್ಕಾರ್ಪಿಯೊ ಡಿಕ್ಕಿ ಹೊಡೆದುದರಿಂದ ಜಿಲ್ಲಾಧಿಕಾರಿ ಅವರ ಪತ್ನಿ ಮತ್ತು ಸ್ಕಾರ್ಪಿಯೊದಲ್ಲಿದ್ದ 5 ಮಂದಿ ಗಾಯಗೊಂಡರು.
ಜಿಲ್ಲಾಧಿಕಾರಿ ಅವರ ಪತ್ನಿ ಸೌದಾ ಅವರ ಕಾಲಿಗೆ ಗಾಯವಾಗಿದ್ದು, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಪುತ್ರ ರಜಾಕ್ ಮತ್ತು ಕಾರು ಚಾಲಕ ಮಹಮ್ಮದ್ ರಫೀಕ್ ಸಣ್ಣಪುಟ್ಟ ತರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಕಾರ್ಪಿಯೊದಲ್ಲಿದ್ದ ಬೆಂಗಳೂರು ಸಿದ್ದಾಪುರ ನಿವಾಸಿಗಳಾದ ಮಹಾದೇವ್ ಎಂಬವರಿಗೆ ಗಂಭೀರ ಗಾಯವಾಗಿದೆ.