ಬಸವ ಜನ್ಮಸ್ಮಾರಕ ನಿರ್ಮಾಣಕ್ಕೂ ಮುನ್ನ ಆ ಶಿಲೆಗಳೆರಡು ಈ ಪರಿಸರದಲ್ಲಿ ಕಳೆದು ಹೋಗಿವೆ. ಬಸವಣ್ಣನವರ ಜೀವನ ಚರಿತ್ರೆಯನ್ನು ಪರಿಚಯಿಸುವ ಈ ಅಪರೂಪದ ಶಿಲೆಗಳನ್ನು ಆಸಕ್ತರು ಸಂಶೋಧಿಸುವುದು ಅಗತ್ಯವಾಗಿದೆ.
ಕಳೆದುಹೋದ ಅತಿಮಹತ್ವದ ಶಿಲೆಗಳನ್ನು ಹುಡುಕಿ ಬಸವನಬಾಗೇವಾಡಿಯ ‘ಬಸವ ಜನ್ಮಸ್ಮಾರಕ’ದಲ್ಲಿ ಪ್ರತಿಷ್ಠಾಪಿಸಿದಾಗ ಬಸವಾಭಿಮಾನಿಗಳಿಗೆ ಅವುಗಳನ್ನು ನೋಡುವ ಭಾಗ್ಯ ಸಿಗುವುದು. ಈ ನಿಟ್ಟಿನಲ್ಲಿ ಸಂಶೋಧಕರು ಆಸ್ಥೆ ವಹಿಸಲಿ.