ಅದ್ದೂರಿ ಸಿನಿಮಾವೊಂದರ ಮೂಲಕ ಕನ್ನಡ ಚಿತ್ರರಂಗದ ಮೂವರು ಗಣ್ಯರ ಸಂಗಮವಾಗುತ್ತಿದೆ. ಮೊದಲ ಬಾರಿಗೆ ಶಿವರಾಜ್ಕುಮಾರ್, ಸುದೀಪ್ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ನಿರ್ದೇಶಕ ಪ್ರೇಮ್.
ಈ ಚಿತ್ರವನ್ನು ಡಾ. ಸಿ. ಆರ್.ಮನೋಹರ್ ನಿರ್ಮಿಸುತ್ತಿದ್ದಾರೆ. ಮನೋಹರ್ ಈಗಾಗಲೇ ಶಿವರಾಜ್ಕುಮಾರ್ ಅವರ ‘ವಜ್ರಕಾಯ’, ಉಪೇಂದ್ರ ಅವರ ‘ಶಿವಂ’ ಹಾಗೂ ಇನ್ನಿತರ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಡಿಸೆಂಬರ್ 25ರ ಕ್ರಿಸ್ಮಸ್ನಂದು ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶೀರ್ಷಿಕೆ ಅನಾವರಣಗೊಳ್ಳಲಿದೆ.