ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ನಗರಸಭೆಯಿಂದ ಶೂನ್ಯ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲಾಗಿದೆ. ಈಗಾಗಲೇ, ‘ಕ್ಲೀನ್ ಯುವರ್ ಸಿಟಿ ಇನ್ ಕರ್ನಾಟಕ’ ಯೋಜನೆಗೆ ಚಾಲನೆ ನೀಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲೂ ಈ ಯೋಜನೆ ಅನುಷ್ಠಾನಗೊಂಡಿದೆ. ಆರಂಭದಲ್ಲಿ ಭರ್ಜರಿಯಾಗಿ ಉದ್ಘಾಟನೆ ಕಂಡ ಈ ಯೋಜನೆ ನಿರೀಕ್ಷಿತಮಟ್ಟದಲ್ಲಿ ಅನುಷ್ಠಾನಗೊಳ್ಳಲಿಲ್ಲ ಎನ್ನುವುದು ನಾಗರಿಕರ ಆರೋಪ.
ಪ್ರಸ್ತುತ ಯೋಜನೆಯ ಪರಿಣಾಮ ಕಾರಿ ಅನುಷ್ಠಾನಕ್ಕೆ ನಗರಸಭೆ ಆಡಳಿತ ಮುಂದಾಗಿದೆ. ತ್ಯಾಜ್ಯದ ಮೂಲ ದಲ್ಲಿಯೇ ಕಸವನ್ನು ಹಸಿ ಮತ್ತು ಒಣ ಕಸವೆಂದು ಬೇರ್ಪಡಿ ಸಲಾಗುತ್ತದೆ. ಹಸಿ ಕಸದಿಂದ ಗೊಬ್ಬರ ತಯಾರಿಸಲಾ ಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ 6 ವಾರ್ಡ್ ಗಳಿಗೆ ಒಂದು ಶೂನ್ಯ ತ್ಯಾಜ್ಯ ನಿರ್ವಹಣೆ ಘಟಕ ಕಾರ್ಯ ನಿರ್ವಹಿ ಸಲಿದೆ.
ಈ ಘಟಕಗಳಿಂದ ಬರುವ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕಾಗಿ ವಿಶೇಷ ಮಾದರಿಯ ತಳ್ಳುವಗಾಡಿ, ಆಟೊ ಟಿಪ್ಪರ್ ಮತ್ತು ಬಿನ್ಸ್ಗಳನ್ನು ₨ 27.50 ಲಕ್ಷ ವೆಚ್ಚದಡಿ ಖರೀದಿಸಲಾಗಿದೆ.
ಪ್ರತಿ ಮನೆಯಿಂದ ಕಸ ಸಂಗ್ರಹಕ್ಕಾಗಿ ನಗರಸಭೆಯಿಂದ ತಲಾ ₨ 4 ಲಕ್ಷ ವೆಚ್ಚದಲ್ಲಿ 5 ಟಾಟಾ ಎಸಿ ವಾಹನ ಖರೀದಿ ಮಾಡಲು ಟೆಂಡರ್ ಕರೆಯ ಲಾಗಿದೆ. ಹೋಟೆಲ್, ವಸತಿ ಗೃಹ, ಕಲ್ಯಾಣ ಮಂಟಪ ಸೇರಿದಂತೆ ಇತರೇ ವಾಣಿಜ್ಯ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹಿಸಲು ಟಾಟಾ ಎಸಿ ವಾಹನ ಖರೀದಿಗೆ ನಗರಸಭೆ ಆಡಳಿತ ನಿರ್ಧರಿಸಿದೆ.
₨ 5 ಲಕ್ಷ ವೆಚ್ಚದಲ್ಲಿ ಬಯೊಗ್ಯಾಸ್ ಘಟಕ ನಿರ್ಮಾಣ, ಕಸ ಪ್ರತ್ಯೇಕಿಸಲು ₨ 6 ಲಕ್ಷ ವೆಚ್ಚದಲ್ಲಿ ಸರಳ ಸಂಸ್ಕರಣ ಯಂತ್ರ ಖರೀದಿಗೆ ಟೆಂಡರ್ ಕರೆಯಲಾಗಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ಜಿಲ್ಲಾ ಕೇಂದ್ರದ ಎಲ್ಲ ವಾರ್ಡಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಲು ನಿರ್ಧರಿಸ ಲಾಗಿದೆ. ಇದಕ್ಕೆ ನಾಗರಿಕರು ಕೂಡ ಸಹಕಾರ ನೀಡಬೇಕು ಎನ್ನುವುದು ಅವರ ಮನವಿ.