‘ರವಿಶಂಕರ್ ಅವರು ಪೌರಾತ್ಯ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಅವರು ಶುಕ್ರವಾರ ಮಲೇಷ್ಯಾ ತಲುಪಿದ್ದಾರೆ. ಕೆಲವು ದಿನಗಳ ಹಿಂದೆ, ಅವರು ಕಾಂಬೋಡಿಯಾದಲ್ಲಿದ್ದರು. ಐಎಸ್ ಉಗ್ರರಿಂದ ನಮಗೆ ಬೆದರಿಕೆ ಬಂದಿತ್ತು. ಹೋಟೆಲ್ ಮ್ಯಾನೇಜರ್, ಆರ್ಟ್ ಆಫ್ ಲಿವಿಂಗ್ ನಿರ್ದೇಶಕ ಹಾಗೂ ಅದರ ಒಬ್ಬ ಹಿರಿಯ ಬೋಧಕ ಸಿಬ್ಬಂದಿಗೆ ಬೆದರಿಕೆ ಬಂದಿದ್ದವು. ನೀವು ನಿಮ್ಮ ಯೋಜನೆಯೊಂದಿಗೆ ಮುಂದುವರಿದರೆ ಪರಿಣಾಮ ಎದುರಿಸುವಿರಿ ಎಂದು ಪತ್ರದಲ್ಲಿ ಎಚ್ಚರಿಸಲಾಗಿತ್ತು’ ಎಂದು ಆರ್ಟ್ ಆಫ್ ಲಿವಿಂಗ್ ವಕ್ತಾರ ನಕುಲ್ ಧವನ್ ಅವರು ತಿಳಿಸಿದ್ದಾರೆ.