ಕರ್ನಾಟಕ ಸಂಗೀತ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿದ್ಯಾಲಯಗಳಿಂದ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಅವರಿಗೆ ಸೂಕ್ತ ಉದ್ಯೋಗ ಅವಕಾಶಗಳು ದೊರೆಯುತ್ತಿಲ್ಲ.
ಕೆಪಿಎಸ್ಸಿಯು ಮೊರಾರ್ಜಿ ವಸತಿ ಶಾಲೆಗಳ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.
ವಿಷಯವಾರು ಶಿಕ್ಷಕರನ್ನೊಳಗೊಂಡಂತೆ ಆರ್ಟ್, ಕ್ರಾಪ್ಟ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗಾಗಿ ಆದೇಶ ಹೊರಡಿಸಿದೆ. ಆದರೆ ಸಂಗೀತ ಶಿಕ್ಷಕರ ನೇಮಕವನ್ನು ಪರಿಗಣಿಸಿಯೇ ಇಲ್ಲ. ರಾಜ್ಯದ ಅನೇಕ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ಅವಶ್ಯಕತೆ ಇದ್ದರೂ ಸರ್ಕಾರವೇಕೆ ಈ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದೆ? ಕೆಪಿಎಸ್ಸಿಯು ಸಂಗೀತ ಶಿಕ್ಷಕರನ್ನು ಕಡೆಗಣಿಸಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಕಾರಣ, ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಎಷ್ಟೋ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ.
ಸ್ನಾತಕೋತ್ತರ ಪದವಿ ಪೂರೈಸಿ ಸಂಗೀತ ಶಿಕ್ಷಕರ ಸೇವೆಗೆ ಅರ್ಹರಾಗಿರುವ ಸಾವಿರಾರು ನಿರುದ್ಯೋಗಿ ಯುವಕರಿದ್ದು, ಅವರ ವಯೋಮಿತಿ ಕೂಡ ಮೀರುತ್ತಿದೆ. ಸಂಗೀತ ಪದವೀಧರರಿಗೆ ಸರ್ಕಾರ ನ್ಯಾಯ ಒದಗಿಸಲಿ.