ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಭಿತ್ತಿ ಚಿತ್ರಗಳೊಂದಿಗೆ ಸಮಾಜವಾದಿ, ಜೆಡಿಯು ಹಾಗೂ ಟಿಎಂಸಿ ಸದಸ್ಯರು ಸಭಾಪತಿಗಳ ಎದುರು ಧರಣಿ ನಡೆಸಿದರು. ಪರಿಣಾಮವಾಗಿ ಶೂನ್ಯವೇಳೆಯಲ್ಲಿ ಒಂದು ಬಾರಿ ಹಾಗೂ ಪ್ರಶ್ನಾವಳಿ ಸಮಯದಲ್ಲಿ ಎರಡು ಬಾರಿ ಸೇರಿದಂತೆ ಊಟದ ವಿರಾಮಕ್ಕೂ ಮುನ್ನವೇ ರಾಜ್ಯಸಭೆಯ ಕಲಾಪ ಮೂರು ಬಾರಿ ಮುಂದೂಡಲಾಯಿತು.