ನವದೆಹಲಿ(ಐಎಎನ್ ಎಸ್): ಲೋಕಸಭೆ ಹಾಗೂ ರಾಜ್ಯ ಸಭೆಯ ಚಳಿಗಾಲದ ಅಧಿವೇಶನವನ್ನು ಕಾಂಗ್ರೆಸ್ ನ ಹಿರಿಯ ನಾಯಕ ಕೇಂದ್ರ ಮಾಜಿ ಸಚಿವ ಮುರುಳಿ ದೇವ್ರಾ ಅವರು ಸೋಮವಾರ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಮುಂದೂಡಲಾಯಿತು.
ಇಂದು ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಮುರುಳಿ ದೇವ್ರಾ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾದ ಪ್ರವಾಹದಲ್ಲಿ ಮೃತರಾದವರು ಹಾಗೂ ಆಂಧ್ರಪ್ರದೇಶದಲ್ಲಿ ಹುದ್ ಹುದ್ ಚಂಡಮಾರುತಕ್ಕೆ ಬಲಿಯಾದವರ ಗೌರವಾರ್ಥ ಸಂತಾಪ ಸೂಚಿಸಿ ಅಧಿವೇಶನವನ್ನು ಮುಂದೂಡಲಾಯಿತು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟದ ನೂತನ ಸಚಿವರನ್ನು ಸ್ವಾಗತಿಸಿ, ಸದನಕ್ಕೆ ಪರಿಚಯಿಸಿದರು.