ಸಭೆಗೆ ಬ್ಯಾಂಕ್ ಕಾರ್ಯದರ್ಶಿ ಪುಷ್ಪಕಲಾ ಅವರು, 2013–14ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಈ ಹಿಂದಿನ ಕಾರ್ಯದರ್ಶಿ ಮಾಡಿದ ರೂ30 ಲಕ್ಷ ಅವ್ಯವಹಾರದಿಂದಾಗಿ ಬ್ಯಾಂಕ್ ಈಗಲೂ ರೂ15 ಲಕ್ಷ ನಷ್ಟದಲ್ಲಿದೆ ಎಂದರು.
ಆಸ್ತಿ ಮುಟ್ಟುಗೋಲು: ‘ಬ್ಯಾಂಕ್ ಹಿಂದಿನ ವ್ಯವಸ್ಥಾಪಕ ಬೊಮ್ಮರಾಯಿಗೌಡ ಮಾಡಿರುವ ರೂ30 ಲಕ್ಷ ಅವ್ಯವಹಾರದ ಬಗ್ಗೆ ತನಿಖೆ ಚರುಕುಗೊಳಿಸಲು ನ್ಯಾಯಾಲಯಕ್ಕೆ ಬ್ಯಾಂಕ್ ಮನವಿ ಮಾಡಿಕೊಳ್ಳಬೇಕು. ಇದಲ್ಲದೆ ಜಿಲ್ಲಾಧಿಕಾರಿಗೂ ಮನವಿ ಮಾಡಿಕೊಂಡು ವ್ಯವಸ್ಥಾಪಕ ಮಾಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬ್ಯಾಂಕ್ಗೆ ಪಾವತಿಸುವ ಕ್ರಮ ತೆಗೆದುಕೊಳ್ಳಬೇಕು ಎಂದು -ಸದಸ್ಯರು ಒತ್ತಾಯಿಸಿದ್ದಾರೆ.