ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಹೋದರಿ ನಿವಾಸದಲ್ಲಿ ಬುಧವಾರ ತಡರಾತ್ರಿ ದರೋಡೆ ನಡೆದಿದೆ.
ಇಲ್ಲಿನ ಶಾಂತಿನಿಕೇತನ ಬಡಾವಣೆಯಲ್ಲಿರುವ ಸಚಿವರ ಸಹೋದರಿ ಕಲ್ಪನಾ ಮಹೇಶಗೌಡ ಪಾಟೀಲ ನಿವಾಸದಲ್ಲಿ 15 ದರೋಡೆಕೋರರು ಚಿನ್ನಾಭರಣ, ನಗದು ಲೂಟಿ ಮಾಡಿದ್ದಾರೆ.ಮನೆಯವರನ್ನು ಕಟ್ಟಿ ಹಾಕಿ ದರೋಡೆ ಎಸಗಲಾಗಿದೆ ಎಂದು ತಿಳಿದು ಬಂದಿದೆ.
ಕಳ್ಳರು ಬೀರುವಿನ ಬಾಗಿಲು ಒಡೆದು, 15 ಲಕ್ಷ ನಗದು, 8 ಲಕ್ಷ ಮೌಲ್ಯದ ವಜ್ರಾಭರಣ, 300 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.