ಹೈದರಾಬಾದ್ (ಪಿಟಿಐ): ಸತ್ಯಂ ಕಂಪ್ಯೂಟರ್ ಕಂಪೆನಿ ವಂಚನೆ ಪ್ರಕರಣದ ತೀರ್ಪು ಮುಂದೆ ಹೋಗಿದೆ. ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ರಜೆ ಮೇಲೆ ತೆರಳಿರುವುದರಿಂದ, ವಿಚಾರಣೆಯನ್ನು ಆ.11ಕ್ಕೆ ಮುಂದೂಡಲಾಗಿದೆ.
2008ರ ಡಿಸೆಂಬರ್ನಲ್ಲಿಯೇ ಬಹಿರಂಗಗೊಂಡಿದ್ದ ಈ ಬೃಹತ್ ಕಾರ್ಪೊರೇಟ್ ವಂಚನೆ ಪ್ರಕರಣದ ವಿಚಾರಣೆ ಜುಲೈ ಎರಡನೇ ವಾರವೇ ಅಂತ್ಯಗೊಂಡಿದೆ. ಜು. 28ರಂದು ತೀರ್ಪು ಪ್ರಕಟಣೆ ಎಂದು ನಿಗದಿಪಡಿಸಲಾಗಿತ್ತು.
ಈ ಸಂಬಂಧ ಸೋಮವಾರ ಕಡ್ಡಾಯವಾಗಿ ಹಾಜರಿರುವಂತೆ ಪ್ರಮುಖ ಆರೋಪಿ, ಸತ್ಯಂ ಕಂಪ್ಯೂಟರ್ನ ಮಾಜಿ ಅಧ್ಯಕ್ಷ ಬಿ.ರಾಮಲಿಂಗ ರಾಜು ಸೇರಿದಂತೆ ಎಲ್ಲಾ 10 ಆರೋಪಿಗಳಿಗೂ ವಿಶೇಷ ನ್ಯಾಯಾಲಯದ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮನ್ಸ್ ಜಾರಿ ಮಾಡಿದ್ದರು.