ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಂ ಹಗರಣ: ಆ.11ಕ್ಕೆ ತೀರ್ಪು?

Last Updated 28 ಜುಲೈ 2014, 19:45 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಸತ್ಯಂ ಕಂಪ್ಯೂಟರ್‌ ಕಂಪೆನಿ ವಂಚನೆ ಪ್ರಕರಣದ ತೀರ್ಪು ಮುಂದೆ ಹೋಗಿದೆ. ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ರಜೆ ಮೇಲೆ ತೆರಳಿರುವುದರಿಂದ, ವಿಚಾರಣೆಯನ್ನು ಆ.11ಕ್ಕೆ ಮುಂದೂಡಲಾಗಿದೆ.

2008ರ ಡಿಸೆಂಬರ್‌ನಲ್ಲಿಯೇ ಬಹಿರಂಗಗೊಂಡಿದ್ದ ಈ ಬೃಹತ್‌ ಕಾರ್ಪೊರೇಟ್‌ ವಂಚನೆ ಪ್ರಕರಣದ ವಿಚಾರಣೆ ಜುಲೈ ಎರಡನೇ ವಾರವೇ ಅಂತ್ಯಗೊಂಡಿದೆ. ಜು. 28ರಂದು ತೀರ್ಪು ಪ್ರಕಟಣೆ ಎಂದು ನಿಗದಿಪಡಿಸಲಾಗಿತ್ತು.

ಈ ಸಂಬಂಧ ಸೋಮವಾರ ಕಡ್ಡಾಯವಾಗಿ ಹಾಜರಿರುವಂತೆ ಪ್ರಮುಖ ಆರೋಪಿ, ಸತ್ಯಂ ಕಂಪ್ಯೂಟರ್‌ನ ಮಾಜಿ ಅಧ್ಯಕ್ಷ ಬಿ.ರಾಮಲಿಂಗ ರಾಜು ಸೇರಿದಂತೆ ಎಲ್ಲಾ 10 ಆರೋಪಿಗಳಿಗೂ ವಿಶೇಷ ನ್ಯಾಯಾಲಯದ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮನ್ಸ್‌ ಜಾರಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT