ಸಿನಿ ನಿಲಯ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ರೆಡ್ ಅಲರ್ಟ್’ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ ಸದ್ಯದಲ್ಲೇ ನಡೆಯಲಿದೆ. ಜುಲೈನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಚಂದ್ರ ಮಹೇಶ್ ನಿರ್ದೇಶಿಸಿದ್ದಾರೆ. ಕಥೆ, ಸಂಭಾಷಣೆಯನ್ನು ಶ್ರೀರಾಮ್ ಬರೆದಿದ್ದಾರೆ. ಕಲ್ಯಾಣ್ ಸಮಿ ಛಾಯಾಗ್ರಹಣ, ರವಿವರ್ಮ ಸಂಗೀತ ನಿರ್ದೇಶನ, ಗೌತಂ ರಾಜ್ ಸಂಕಲನವಿದೆ. ಮಹದೇವ್, ಅಂಜನಾ ಮೆನನ್, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್, ಸುಮನ್, ವಿನೋದ್ ಆಳ್ವ, ಮೋಹನ್, ಕೆಂಪೇಗೌಡ, ಅನು ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.