81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಕುರಿತಂತೆ ಉಲ್ಬಣಗೊಂಡಿರುವ ಅಂತಃಕಲಹ ದುರದೃಷ್ಟಕರ. ಎರಡು ಬಣಗಳ ಕಿತ್ತಾಟದಿಂದ ಹಾವೇರಿ ಜಿಲ್ಲಾ ಸಾಹಿತ್ಯಾಸಕ್ತರು ತಮ್ಮ ಜಿಲ್ಲೆಯಲ್ಲಿ ಸಮ್ಮೇಳನ ನೋಡುವ ಸಂತೋಷದಿಂದ ವಂಚಿತರಾಗುವುದು ಸರಿಯಲ್ಲ. ದಶಕ ಗಳ ಬೇಡಿಕೆಯ ಫಲವಾಗಿ ಬಂದ ಸಮ್ಮೇಳನದ ಭಾಗ್ಯ ಜಿಲ್ಲೆಯಿಂದಲೇ ಸ್ಥಳಾಂತರಗೊಳ್ಳಬಹುದೆಂಬ ಆತಂಕ ಎದುರಾಗಿರುವುದು ದೌರ್ಭಾಗ್ಯವೇ ಸರಿ.
ಇದೇ 26ರಂದು ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ನಡೆಯಲಿರುವ ಪರಿಷತ್ತಿನ 12 ಸದಸ್ಯರ ಉಪ ಸಮಿತಿಯ ಸಭೆ ಅಖಂಡ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸಿ, ಜಿಲ್ಲೆಯೊಳಗೆ ಯಾವ ಪ್ರದೇಶದಲ್ಲಾದರೂ ಸಮ್ಮೇಳನ ನಡೆಸುವ ನಿರ್ಣಯ ಕೈಗೊಳ್ಳಲಿ. ಕನಕದಾಸರ ನಾಡು ಮತ್ತು ಸರ್ವಜ್ಞನ ವಚನ ಭೂಮಿ ಹಾವೇರಿ ಜಿಲ್ಲೆಯ ಯಾವುದೇ ಪ್ರದೇಶದಲ್ಲಾದರೂ ಸಮ್ಮೇಳನ ನಡೆಯಲಿ. ಅದು ಬಿಟ್ಟು ಜಿಲ್ಲೆಯಿಂದಲೇ ಸ್ಥಳಾಂತರಗೊಂಡರೆ ಅದಕ್ಕೆ ಎರಡೂ ಬಣಗಳು ಹೊಣೆ ಹೊರಬೇಕು.