ಕನ್ನಡ ಇಂದು ಉಳಿಯಬೇಕಾಗಿರುವುದು ಸರ್ಕಾರಿ ಶಾಲೆಗಳಿಂದ ಮಾತ್ರ. ಅಲ್ಲಿ ಓದುವವರು ನಿರ್ಗತಿಕ, ಅಸಹಾಯ ದೀನದಲಿತ ಕೂಲಿ ಕಾರ್ಮಿಕರ ಮಕ್ಕಳು. ಪ್ರಜಾಪ್ರಭುತ್ವದಲ್ಲಿ ಅದನ್ನು ಅರಿತು ಶಾಸಕರಾದ ಬಿ. ಸುರೇಶಗೌಡ ಅವರು ತಮ್ಮ ಶಾಸಕರ ನಿಧಿಯಿಂದ ₨ 50 ಲಕ್ಷ ಖರ್ಚು ಮಾಡಿ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಸರ್ಕಾರಿ ಶಾಲೆಯನ್ನು ಒಂದು ಅತ್ಯುತ್ತಮ ವಿದ್ಯಾಕೇಂದ್ರವಾಗಿ ಮಾಡಿದ್ದಾರೆ.
ಅವರು ಕನ್ನಡ ಉಳಿಸಲು ಕ್ರಿಯಾಶೀಲವಾಗಿ ತೊಡಗಿಕೊಂಡ ಆದರ್ಶ ಶಾಸಕರಾಗಿದ್ದಾರೆ (ಪದ್ಮರಾಜ ದಂಡಾವತಿ, ನಾಲ್ಕನೇ ಆಯಾಮ, ಸೆ.14)ಇಂತಹ ಆಸ್ತಿಯನ್ನು ಇತರ ಶಾಸಕರು ನಿರ್ಮಿಸಿದರೆ ಕನ್ನಡ ತಾನಾಗಿಯೇ ಉಳಿದು ಬೆಳೆಯುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.