ಮುಂಬೈ (ಪಿಟಿಐ): ಉಪನಗರ ಬಾಂದ್ರಾದಲ್ಲಿ 12 ವರ್ಷಗಳ ಹಿಂದೆ ಪಾದಚಾರಿ ಹಾದಿಯಲ್ಲಿ ಮಲಗಿದ್ದವರ ಮೇಲೆ ಕಾರು ಹಾಯಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಅಪಘಾತವೆಸಗುವ ಒಂದು ಗಂಟೆ ಮೊದಲು ಪಂಚತಾರಾ ಹೋಟೆಲ್ಗೆ ಸ್ನೇಹಿತರ ಜತೆ ಮದ್ಯ ಸೇವಿಸಲು ಬಂದಿದ್ದರು ಎಂದು ಹೋಟೆಲ್ನ ಬಾರ್ ವಿಭಾಗದ ನೌಕರ ಸಾಕ್ಷ್ಯ ನೀಡಿದ್ದಾನೆ.
ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ಅವರನ್ನು ಗುರುತಿಸಿದ ಹೋಟೆಲ್ ನೌಕರ ಮಲೈ ಬೌಗ್, ತಾನು ಆ ದಿನ ಸಲ್ಮಾನ್, ಅವರ ಸ್ನೇಹಿತರಿಗೆ ಕಾಕ್ಟೇಲ್ ಸರಬರಾಜು ಮಾಡಿದ್ದಾಗಿ ನ್ಯಾಯಾಧೀಶರ ಎದುರು ಸಾಕ್ಷ್ಯ ಹೇಳಿದ್ದಾನೆ.
ಡಿಎಂಕೆ ಕಾರ್ಯಕರ್ತರ ಬಂಧನ
ಚೆನ್ನೈ (ಪಿಟಿಐ): ಪತ್ರಕರ್ತರ ಮೇಲೆ ಸೋಮವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಡಿಎಂಕೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನದವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.