ಬೆಂಗಳೂರು: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇದೇ 25ರಂದು ನಡೆಯಲಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸೆಂಟರ್್ (ಎಐಯುಟಿಯುಸಿ) ಬೆಂಬಲ ಸೂಚಿಸಿದೆ.
‘ಹಲವಾರು ವರ್ಷಗಳಿಂದ ನೌಕರರ ವೇತನ ಹೆಚ್ಚಳ ಮಾಡದೆ ದಿಢೀರನೆ ಕೇವಲ ಶೇಕಡಾ ಎಂಟರಷ್ಟು ಹೆಚ್ಚಳವನ್ನು ಏಕಪಕ್ಷೀಯವಾಗಿ ಘೋಷಿಸಿರುವುದು ಕೈಗಾರಿಕಾ ವಿವಾದ ಕಾನೂನಿನ ಉಲ್ಲಂಘನೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಹಣದುಬ್ಬರವು ತೀವ್ರವಾಗಿ ಏರುತ್ತಿದೆ. ಇಂತಹ ಸಂದರ್ಭದಲ್ಲಿ ಈ ವೇತನ ಪರಿಷ್ಕಣೆಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ತಿಳಿಸಿದೆ.