ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಬಾಧೆ: ರೈತ ಆತ್ಮ ಹತ್ಯೆ

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಳೇಬೀಡು: ಸಾಲ ಬಾಧೆಯಿಂದ ಬೇಸತ್ತ ರೈತ ಶಂಕರಾಚಾರ್‌ (57) ವಿಷ ಸೇವಿಸಿ ಆತ್ಮ­ಹತ್ಯೆ ಮಾಡಿಕೊಂಡ ಘಟನೆ ರಾಜನಶಿರಿಯೂರು ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೂರು ಎಕರೆ ಜಮೀನಿಲ್ಲಿ ಕೃಷಿ ಮಾಡಿಕೊಂಡು ಶಂಕರಾಚಾರ್‌ ಕುಟುಂಬ ನಿರ್ವಹಿಸುತ್ತಿದ್ದರು. ‘ಮೂರು ವರ್ಷಗಳಿಂದ ತೀವ್ರ ಬರಗಾಲ ಬಂದಿದ್ದರಿಂದ ಕೊಳವೆ ಬಾವಿ ಬತ್ತಿ ಹೋಗಿದ್ದಲ್ಲದೆ, ಹೊಸದಾಗಿ 3 ಬಾವಿ ತೋಡಿಸಿದರೂ ಹನಿ ನೀರೂ ಬರಲಿಲ್ಲ. ಬ್ಯಾಂಕ್ ಸಾಲ ರೂ.85,000 ಹಾಗೂ ಕೈಸಾಲ ರೂ.1.5 ಲಕ್ಷ  ಮಾಡಿಕೊಂಡಿದ್ದರು. ಇದರಿಂದ ಅವರು  ಆಘಾತಕ್ಕೊಳಗಾಗಿದ್ದರು’ ಎಂದು ಕುಟುಂಬ­ದವರು ತಿಳಿಸಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT