ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಅಜ್ಜಿಯ ಸಾವಿನ ಸುದ್ದಿ ಕೇಳಿದ ತಕ್ಷಣ ಮೊಮ್ಮಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಗಳತಗಾ ಗ್ರಾಮದಲ್ಲಿ ಶನಿವಾರ ನಡೆದಿದೆ.
ಶಾನಕ್ಕ ಮಹಾಲಿಂಗ ಪರಾಂಜಪೆ (75) ಕೆಲ ದಿನಗಳ ಹಿಂದೆ ರಾಯಬಾಗ ದಲ್ಲಿರುವ ಮಗನ ಮನೆಗೆ ಹೋಗಿದ್ದರು. ಅವರು ಅಲ್ಲಿ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕೇಳಿದ ತಕ್ಷಣ ಎದೆ ನೋವಿನಿಂದ ಮೊಮ್ಮಗ ಅಮಿತ್ ಅಲಿಯಾಸ್ ಅಪ್ಪಾ ಸಾಹೇಬ ಮೋಹನ ಶಾಸ್ತ್ರಿ (31) ಕುಸಿದುಬಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆೇ ಅವರು ಮೃತಪಟ್ಟರು.
ಇಬ್ಬರ ಅಂತ್ಯಸಂಸ್ಕಾರವನ್ನು ಒಂದೇ ಕಡೆ ನಡೆಸಲಾಯಿತು. ಶಾನಕ್ಕಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಮಿತ್ ಏಕೈಕ ಪುತ್ರನಾಗಿದ್ದು ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.